Sunday, August 9, 2026

BDA Apartments

Home Front Page ಚಿರತೆ ದಾಳಿಗೆ ಮೃತಪಟ್ಟ ವೃದ್ಧೆ ಮತ್ತು ಬಾಲಕನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ...

ಚಿರತೆ ದಾಳಿಗೆ ಮೃತಪಟ್ಟ ವೃದ್ಧೆ ಮತ್ತು ಬಾಲಕನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಚಿವ ಎಸ್.ಟಿ ಸೋಮಶೇಖರ್

ಮೈಸೂರು,ಜನವರಿ,24,2023(www.justkannada.in):  ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನಲ್ಲಿ ಚಿರತೆ ದಾಳಿಗೆ ಒಳಗಾಗಿ ಮೃತಪಟ್ಟ ವೃದ್ಧೆ ಸಿದ್ಧಮ್ಮ ಮತ್ತು ಬಾಲಕ ಜಯಂತ್ ನಿವಾಸಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಟಿ.ಸೋಮಶೇಖರ್  ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಟಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಮೃತಪಟ್ಟ 11 ವರ್ಷದ ಬಾಲಕ ಜಯಂತ್‌ ನಿವಾಸ ಹಾಗೂ ಕನ್ನನಾಯಕನಹಳ್ಳಿ ಗ್ರಾಮದಲ್ಲಿ ಮೃತಪಟ್ಟ ಸಿದ್ದಮ್ಮ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಗ್ರಾಮಸ್ಥರ ಅಹವಾಲು ಆಲಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ದಾಳಿ ಮಾಡುತ್ತಿರುವ ಚಿರತೆ ಶೂಟೌಟ್ ಮಾಡಲು  ಜಿಲ್ಲಾಧಿಕಾರಿ ತಿಳಿಸಿದ್ದಾರೆ.  ಸಿಎಂ ಇಂದು ಐಪವರ್ ಕಮಿಟಿ ಮೀಟಿಂಗ್ ಕರೆದಿದ್ದಾರೆ. ಜಿಲ್ಲಾಧಿಕಾರಿ ಅರಣ್ಯಾಧಿಕಾರಿಗಳ ಉನ್ನತ ಮೀಟಿಂಗ್ ಮಾಡುತ್ತಾರೆ. ದಾಳಿ ಮಾಡುತ್ತಿರುವ ಚಿರತೆ ಶೂಟೌಟ್ ಬಗ್ಗೆ ಸಿಎಂ ಅವರೇ ನಿರ್ಧರಿಸುತ್ತಾರೆ ಎಂದು ತಿಳಿಸಿದರು.

Key words: Minister -ST Somashekhar –visit-T.Narasipur-  died – leopard attack