ನಮ್ಮ ಸಮುದಾಯಕ್ಕೆ ಮತ್ತೆರಡು ಸಚಿವ ಸ್ಥಾನ ನೀಡಿ- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಜೂನ್,13,2026 (www.justkannada.in): ಎಸ್‌ ಟಿ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಮತ್ತಷ್ಟು ಪ್ರಾತಿನಿಧ್ಯ ನೀಡಬೇಕು. ನಮ್ಮ ಸಮುದಾಯಕ್ಕೆ  ಮತ್ತೆರಡು ಸಚಿವ ಸ್ಥಾನಗಳನ್ನು ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ,  ಈ ಹಿಂದೆ ಎಸ್‌ಟಿ ಸಮುದಾಯದ ಮೂವರು ಸಚಿವರಿದ್ದರು.ಈಗ  ನಮ್ಮ ಸಮುದಾಯಕ್ಕೆ ಮತ್ತೆರಡು ಖಾತೆಗಳನ್ನ ನೀಡಬೇಕು.  ಇದೇನೂ ನಮ್ಮ ಹೆಚ್ಚುವರಿ ಬೇಡಿಕೆಯಲ್ಲ, ಹಳೆಯ ಪ್ರಾತಿನಿಧ್ಯದ ಮುಂದುವರಿಕೆಯಷ್ಟೇ ಎಂದರು.

ಸಿಎಲ್ ಪಿ ಸಭೆ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳೀ, ಈ ಸಭೆಯನ್ನು ಕೇವಲ ಶಾಸಕರಿಗೆ ತರಬೇತಿ ನೀಡಲು ಕರೆಯಲಾಗಿದೆ. ಮತದಾನ ಮಾಡುವಾಗ ಶಾಸಕರಿಂದ ಯಾವುದೇ ತಪ್ಪುಗಳಾಗಬಾರದು. ಅದಕ್ಕಾಗಿ ಸರಿಯಾಗಿ  ಅಭ್ಯಾಸ ಮಾಡಬೇಕಾಗುತ್ತದೆ. ಎರಡು-ಮೂರು ಮತಗಳು ತಪ್ಪಾದರೂ ಅಭ್ಯರ್ಥಿ ಔಟ್ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸುರಕ್ಷತೆ ಮತ್ತು ಸ್ಟ್ರಾಟಜಿ  ರೂಪಿಸಲು ಶಾಸಕರನ್ನು ಕರೆದುಕೊಂಡು ಹೋಗಲಾಗುತ್ತಿದೆ ಎಂದು ತಿಳಿಸಿದರು.

Key words: our community, two,ministerial posts, Minister, Satish Jarkiholi