ರಾಯಚೂರು,ಜೂನ್,16,2025 (www.justkannda.in): ನವೆಂಬರ್ ನಲ್ಲಿ ಸಿಎಂ ಬದಲಾವಣೆ ಆಗಲಿದ್ದು ಮಲ್ಲಿಕಾರ್ಜುನ ಖರ್ಗೆ ಅಥವಾ ಡಿಕೆ ಶಿವಕುಮಾರ್ ಸಿಎಂ ಆಗಬಹುದು ಎಂದು ಎಂಎಲ್ ಸಿ ಹೆಚ್. ವಿಶ್ವನಾಥ್ ಹೇಳಿಕೆ ಕುರಿತು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸಿಎಂ ಬದಲಾವಣೆ ಬಗ್ಗೆ ವರಿಷ್ಟರನ್ನ ಕೇಳಿದ್ರೆ ಉತ್ತರಿಸಬಹುದು ಆ ಬಗ್ಗೆ ಮಾತನಾಡುವ ಅಧಿಕಾರ, ಚರ್ಚಿಸುವ ಅಧಿಕಾರ ನನಗಿಲ್ಲ ಎಂದರು.
ಇನ್ನು ಖರ್ಗೆ ಸಿಎಂ ಆಗುತ್ತಾರೆ ಎಂಬ ಹೇಳಿಕ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಅವರು ಸಿಎಂ ಆಗ್ತಾರೆ ಎಂದು ಹೇಳಿದ್ಯಾರು? ಈ ಬಗ್ಗೆ ಅವರೇ ಹೇಳಬೇಕು. ನನಗೆ ಎಷ್ಟು ವಿಷಯ ಗೊತ್ತಿದೆಯೋ ಅಷ್ಟು ಮಾತ್ರ ಹೇಳುತ್ತೇನೆ ಎಂದರು.
Key words: CM, change, Minister, Satish Jarkiholi