ಬೆಂಗಳೂರು,ಮೇ,19,2026 (www.justkannada.in): ಸಿಎಂ ಬದಲಾವಣೆ ವಿಚಾರ ಚರ್ಚೆಯಾಗುತ್ತಿದ್ದು ಈ ಮಧ್ಯೆ ಶಾಸಕರ ದೆಹಲಿ ಪ್ರವಾಸಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ದೆಹಲಿಯಲ್ಲಿ ಏನು ಇಲ್ಲ. ದೆಹಲಿಯಲ್ಲಿ ನಮಗೆ ಏನು ಕೆಲಸವಿಲ್ಲ. ಹೈಕಮಾಂಡ್ ನಾಯಕರು ಸಿಎಂ ಮತ್ತು ಡಿಸಿಎಂರನ್ನು ಕರೆಸಿ ಮಾತನಾಡುತ್ತಾರೆ ನಮ್ಮನ್ನಲ್ಲ ಎಂದರು.
ರಾಹುಲ್ ಗಾಂಧಿ ಒಂದು ವಾರದ ಬಳಿಕ ದೆಹಲಿಗೆ ಬರುತ್ತಾರೆ. ದೆಹಲಿಗೆ ಬಂದ ಬಳಿಕ ಆ ಮೇಲೆ ರಾಜ್ಯ ನಾಯಕರನ್ನ ದೆಹಲಿಗೆ ಕರೆಸಿಕೊಂಡು ಚರ್ಚಿಸುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
Key words: CM Change, MLAs, Delhi tour, Minister Sathish Jarkiholi







