ಸಚಿನ್, ಕೊಹ್ಲಿ, ಲಾರಾ ಅನೇಕರು ಸೇರಿ ಒಬ್ಬ ಸಿದ್ದರಾಮಯ್ಯ- ಸಚಿವ ಸಂತೋಷ್ ಲಾಡ್

ಬಾಗಲಕೋಟೆ,ಏಪ್ರಿಲ್,2,2026 (www.justkannada.in): ಸಚಿನ್,  ವಿರಾಟ್ ಕೊಹ್ಲಿ, ಲಾರಾ ಸೇರಿ ಅನೇಕರು ಸೇರಿ ಒಬ್ಬರು ಸಿದ್ದರಾಮಯ್ಯ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಗುಣಗಾನ ಮಾಡಿದರು.

ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಸಚಿವ ಸಂತೋಷ್ ಲಾಡ್, ಸಿಎಂ ಸಿದ್ದರಾಮಯ್ಯ ಬಗ್ಗೆ ಬಿಜೆಪಿಗರು ಹಗುರವಾಗಿ ಮಾತುಗಳನ್ನಾಡುತ್ತಾರೆ. ಗುಜರಾತ್ ಗೂ ಕರ್ನಾಟಕಕ್ಕೂ  ಹೋಲಿಕೆ ಮಾಡಿ ನೋಡಿ ಸಾಕು.  ಚುನಾವಣೆ ವೇಳೆ ಮಾತ್ರ ಬಿಜೆಪಿಗರು ಗೋಮಾತೆ ಬಗ್ಗೆ ಮಾತನಾಡುತ್ತಾರೆ. ಇಡೀ ಜಗತ್ತಿನಲ್ಲಿ ನಮ್ಮ ದೇಶ ಬೀಫ್ ರಫ್ತಿನಲ್ಲಿ 2ನೇ ಸ್ಥಾನದಲ್ಲಿದೆ   ಗೋಮಾತೆಯನ್ನ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿಬಿಡಿ ಎಂದು ಟಾಂಗ್ ಕೊಟ್ಟರು.

ಗೋವು ಸಾಗಾಣಿಕೆ ತಡೆಯುವ ಹೆಸರಲ್ಲಿ ಹಣ ವಸೂಲಿ ಮಾಡಿದ್ದಾರೆ.  ಅದರ ಹಣದಿಂದ 800 ಬಿಜೆಪಿ ಕಚೇರಿ ಕಟ್ಟಿದ್ದಾರೆ  ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದರು.

Key words: Sachin, Kohli, Lara, are one, Siddaramaiah, Minister, Santosh Lad