ಬೆಂಗಳೂರು,ಮಾರ್ಚ್,21,2026 (www.justkannada.in): ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರವನ್ನ ಏರಿಕೆ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಸಾರಿಗೆ ನಿಗಮಗಳಿಂದ ಬಲ್ಕ್ ನಲ್ಲೇ ಡೀಸೆಲ್ ಖರೀದಿ ಮಾಡಲಾಗುತ್ತಿದೆ. ಆದರೆ ಬಸ್ ಟಿಕೆಟ್ ದರ ಹೆಚ್ಚು ಮಾಡುವುದಿಲ್ಲ. ಯುದ್ದದ ಎಫೆಕ್ಟ್ ನಿಂದಾಗಿ ಬಲ್ಕ್ ನಲ್ಲಿ ಡಿಸೇಲ್ ದರ ಹೆಚ್ಚಗಿದೆ. ಆದರೂ ಅಲ್ಲೇ ಡಿಸೇಲ್ ಖರೀದಿಸಲಾಗುತ್ತದೆ. ಆದರೆ ಬಸ್ ಪ್ರಯಾಣ ದರ ಏರಿಕೆ ಮಾಡಲ್ಲ ಎಂದರು.
ಇಸ್ರೇಲ್ ಇರಾನ್ ನಡುವಿನ ಯುದ್ಧದ ಪರಿಣಾಮ ತೈಲ ಮಾರುಕಟ್ಟೆಗೆ ತಟ್ಟಿದ್ದು, ದೇಶಾದ್ಯಂತ ಪ್ರೀಮಿಯಂ ದರ್ಜೆಯ ಪವರ್ ಪೆಟ್ರೋಲ್ ಬೆಲೆ ಏರಿಕೆ ಮಾಡಲಾಗಿದೆ. ನಿನ್ನೆ ಪ್ರೀಮಿಯಂ ಪೆಟ್ರೋಲ್ ಬೆಲೆ 2.30 ರೂ .ಗಳು ಏರಿಕೆಯಾಗಿದೆ.
Key words: Bus ticket, prices, Minister, Ramalingareddy







