Wednesday, August 12, 2026

BDA Apartments

Home Front Page ಪಿಣರಾಯಿ ವಿಜಯನ್ ತಮ್ಮ ಕೇರಳ ರಾಜ್ಯದ ಬಗ್ಗೆ ನೋಡಿಕೊಳ್ಳಲಿ- ಸಚಿವ ರಾಮಲಿಂಗರೆಡ್ಡಿ ತಿರುಗೇಟು

ಪಿಣರಾಯಿ ವಿಜಯನ್ ತಮ್ಮ ಕೇರಳ ರಾಜ್ಯದ ಬಗ್ಗೆ ನೋಡಿಕೊಳ್ಳಲಿ- ಸಚಿವ ರಾಮಲಿಂಗರೆಡ್ಡಿ ತಿರುಗೇಟು

ಉಡುಪಿ,ಡಿಸೆಂಬರ್,27,2025 (www.justkannada.in): ಬೆಂಗಳೂರಿನ ಯಲಹಂಕದ ಫಕೀರ್  ಕಾಲೋನಿ ಮತ್ತು ವಸೀಮ್ ಲೇಔಟ್ ನ ವಸತಿಗಳನ್ನು ನೆಲಸಮಗೊಳಿಸಿರುವ ಕುರಿತು ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿರುಗೇಟು ನೀಡಿದ್ದಾರೆ.

ಉಡುಪಿಯ ಬೈಂದೂರಿನಲ್ಲಿ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಕೇರಳ ಸಿಎಂ ಪಿಣರಾಯಿ ಯಾಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಪಿಣರಾಯಿ ವಿಜಯನ್ ತಮ್ಮ ಕೇರಳ ರಾಜ್ಯ ಬಗ್ಗೆ ನೋಡಿಕೊಳ್ಳಲಿ. ನಮ್ಮ ರಾಜ್ಯದ ವಿಷಯವನ್ನು ನಾವು ನೋಡಿಕೊಳ್ಳುತ್ತೇವೆ.  ನೀವು ಅಲ್ಲಿರುವ ಸಮಸ್ಯೆಗಳನ್ನು ನೋಡಿಕೊಳ್ಳಿ.  ನಿಮಗೆ ನಮ್ಮ ರಾಜ್ಯದ ಚಿಂತೆ ಬೇಡ ಎಂದು ಟಾಂಗ್ ಕೊಟ್ಟರು.

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಟೀಕೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಹ ತಿರುಗೇಟು ನೀಡಿದ್ದಾರೆ.

Key words: Minister, Ramalinga Reddy, Kerala CM, Pinarayi Vijayan