ರಾಜ್ಯೋತ್ಸವದಂದು ಕನ್ನಡ ಜಾಗೃತಿ ಮೂಡಿಸಲು ಸಚಿವ ಆರ್.ಅಶೋಕ್ ಮಾಡಿದ್ದು ಹೀಗೆ…!

ಬೆಂಗಳೂರು,ನವೆಂಬರ್,01,2020(www.justkannada.in) : ಜೋಳಿಗೆ ಹಾಕಿಕೊಂಡು ಕನ್ನಡದ ಪುಸ್ತಕಗಳ ಮಾರಾಟ ಮಾಡುವ ಮೂಲಕ ಕಂದಾಯ ಸಚಿವ ಆರ್.ಅಶೋಕ್ ಕನ್ನಡದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.jk-logo-justkannada-logo

65ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯ ಪ್ರಯುಕ್ತವಾಗಿ ಸಚಿವ ಆರ್.ಅಶೋಕ್ ಜನರಲ್ಲಿ ಕನ್ನಡದ ಬಗ್ಗೆ ಅರಿವು ಮೂಡಿಸಲು ವಿನೂತನ ಪ್ರಯತ್ನಕ್ಕೆ ಮುಂದಾದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಚಿವರು ಜೋಳಿಗೆ ಹಾಕಿಕೊಂಡು ಕನ್ನಡ ಪುಸ್ತಕಗಳ ಮಾರಾಟಕ್ಕೆ ಮಾಡಿದರು. ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಮಾರಾಟಕ್ಕೆ ಬಂದ ಸಚಿವರು ಕನ್ನಡ ಪುಸ್ತಕಗಳನ್ನು ಓದಿ, ಕನ್ನಡ ಬೆಳಸಿ, ಉಳಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು.

Minister R.Ashok-raise-awareness-Kannada-Rajyotsavam

ಎಂ.ಇ.ಎಸ್. ಕಾರ್ಯಕರ್ತರ ಪುಂಡಾಟಿಕೆ ವಿರುದ್ಧ ಆಕ್ರೋಶ

ಈ ನಡುವೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಕನ್ನಡದ ಬಗ್ಗೆ ಕನ್ನಡ ಬಾವುಟದ ಬಗ್ಗೆ ಮಾತನಾಡಿದ್ರೆ ಯಾವ ಭಾಷೆಯಲ್ಲಿ ಉತ್ತರಿಸಬೇಕೋ ಆ ಭಾಷೆಯಲ್ಲಿ ಉತ್ತರ ಕೊಡ್ತೀವಿ. ಮಹಾರಾಷ್ಟ್ರ ಏಕೀಕರಣ ಸಮಿತಿ ಮಾಡಿಕೊಂಡು ಬಂದಿದೆ. ಅವರ ಪುಂಡಾಟಿಕೆಗೆಲ್ಲ ಸರಿಯಾದ ಬುದ್ಧಿಯನ್ನ ಕಲಿಸುತ್ತೇವೆ ಎಂದು ಬೆಳಗಾವಿಯಲ್ಲಿ ಎಂ.ಇ.ಎಸ್. ಕಾರ್ಯಕರ್ತರ ಪುಂಡಾಟಿಕೆ ಕುರಿತು ಕಂದಾಯ ಸಚಿವ ಆರ್.ಅಶೋಕ್ ಆಕ್ರೋಶವ್ಯಕ್ತಪಡಿಸಿದರು.

Minister R.Ashok-raise-awareness-Kannada-Rajyotsavam

key words : Minister R.Ashok-raise-awareness-Kannada-Rajyotsavam …