Tuesday, August 4, 2026

BDA Apartments

Home Front Page ಲೈಂಗಿಕ ದೌರ್ಜನ್ಯ ಕೇಸ್: ಬೀಟ್ ವ್ಯವಸ್ಥೆ ಪರಿಣಾಮಕಾರಿ ಮಾಡುವಂತೆ ಕಮಿಷನರ್ ಗೆ ಸೂಚನೆ- ಗೃಹ ಸಚಿವ...

ಲೈಂಗಿಕ ದೌರ್ಜನ್ಯ ಕೇಸ್: ಬೀಟ್ ವ್ಯವಸ್ಥೆ ಪರಿಣಾಮಕಾರಿ ಮಾಡುವಂತೆ ಕಮಿಷನರ್ ಗೆ ಸೂಚನೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ಏಪ್ರಿಲ್,7,2025 (www.justkannada.in): ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ರಾತ್ರಿ ವೇಳೆ ರಸ್ತೆಯಲ್ಲಿ ಯುವತಿಗೆ  ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ  ಪ್ರಕರಣ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ದೊಡ್ಡ ಸಿಟಿಯಲ್ಲಿ ಅಲ್ಲಿ ಇಲ್ಲಿ ಇಂತಹ ಘಟನೆಗಳು ಆಗುತ್ತವೆ. ನಿತ್ಯವೂ ಪೊಲೀಸ್ ಕಮಿಷನರ್ ಎಚ್ಚರಿಕೆಯಿಂದ ಇರಬೇಕು.  ಬೀಟ್ ವ್ಯವಸ್ಥೆ ಚೆನ್ನಾಗಿ ಆಗಬೇಕು  ಅಂತಾ ನಾನು ಹೇಳಿದ್ದೇನೆ. ಪ್ರತಿ  ಏರಿಯಾ ಮಾನಿಟರ್ ಮಾಡಬೇಕು ಎಂದಿದ್ದೇನೆ.  ಅಲ್ಲೊಂದು ಇಲ್ಲೊಂದು ಘಟನೆ ಆಗುತ್ತೆ ಅಷ್ಟೆಕ್ಕೆ ನಾವು ಬಿಡಲ್ಲ. ಇಲಾಖೆಯಿಂದ ಕೆಲಸ ಮಾಡುತ್ತೇವೆ.  ಹೀಗಾಗಿ ಬೆಂಗಳೂರು ಶಾಂತವಾಗಿ ಇದೆ. ಭೀಟ್ ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿ ಮಾಡುವಂತೆ ಕಮಿಷನರ್ ಗೆ ಸೂಚನೆ ನೀಡಿದ್ದೇನೆ ಎಂದರು.

ಬಿಜೆಪಿ ಜನಾಕ್ರೋಶ ಯಾತ್ರೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಬಿಜೆಪಿಗೆ ನಮ್ಮ ಯಶಸ್ಸು ತಡೆಯೋಕೆ ಆಗಲ್ಲ. 2 ವರ್ಷದಿಂದ ಒಳ್ಳೆಯ ಆಡಳಿತ ನೀಡಿದ್ದೇವೆ.  ಗ್ಯಾರಂಟಿ ಯಶಸ್ವಿ ಜಾರಿ ಮಾಡಿದ್ದೇವೆ.  ನಮ್ಮ ಆಡಳಿತ ಜನರಿಗೆ ನೆಮ್ಮದಿ ತಂದಿದೆ.  ಯಾವ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಬಿಜೆಪಿಯವರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ ಅಷ್ಟೆ ಎಂದರು.

Key words: Sexual assault, case, Bangalore, Beat system, effective, Minister, Parameshwar