ಬೆಂಗಳೂರು,ಮೇ,25,2026 (www.justkannada.in): ಸಚಿವ ಸ್ಥಾನ ತ್ಯಾಗ ಮಾಡುವ ವಿಚಾರ ಸಂಬಂಧ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ಸಿಎಂ, ಡಿಸಿಎಂ ಅವರಿಬ್ಬರನ್ನು ದೆಹಲಿಗೆ ಕರೆದಿದ್ದಾರೆ. ಹಾಗಾಗಿ ಅವರು ಹೋಗುತ್ತಿದ್ದಾರೆ. ನಾನು ದೆಹಲಿಗೆ ಹೋಗುತ್ತಿಲ್ಲ. ಸಚಿವ ಸ್ಥಾನ ತ್ಯಾಗ ಮಾಡುವ ವಿಚಾರ ಎಲ್ಲದಕ್ಕೂ ತಯಾರಿದ್ದೇನೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಅದಕ್ಕೆ ಬದ್ದ ಎಂದರು.
ಪಡಿತರ ರಾಗಿ ಕೊಡುವ ವಿಚಾರ, ಕೇಂದ್ರದಿಂದ 3 ರಾಜ್ಯದಿಂದ 3 ಕೆಜಿ ರಾಗಿ ಕೊಡಿತ್ತಿದ್ದೇವೆ. ಕೇಂದ್ರ ರಾಜ್ಯ ಸರ್ಕರದಿಂದ 4 ಕೆ.ಜಿ ಅಕ್ಕಿ ಕೊಡುತ್ತಿದ್ದೇವೆ. ಒಟ್ಟು 10 ಕೆಜಿ ಪಡಿತರ ಕೊಡತ್ತಿದ್ದೇವೆ. ನಮ್ಮಲ್ಲಿ ರಾಗಿ ಸ್ಟಾಕ್ ಇದೆ. ತಡವಾದರೂ ಆ ತಿಗಳು ಏನು ಕೊಡಬೇಕೋ ಅದನ್ನ ಕೊಡುತ್ತೇವೆ ಇಂದಿರಾ ಕಿಟ್ ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇಂದಿರಾ ಕಿಟ್ ಪೂರೈಕೆ ವಿಚಾರವಾಗಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ರಾಗಿ ಪ್ಯಾಕ್ ತಡ ಆಗಬಹುದು ಆದರೆ ಮಿಸ್ ಇಲ್ಲ ಎಂದರು.
Key words: Minister, Muniyappa, high command, minister







