ವಿಜಯಪುರ,ಮೇ,3,2025 (www.justkannada.in): ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಸ್ವೀಕರಿಸಿ ಸಚಿವ ಶಿವಾನಂದ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರ ಕುರಿತು ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಶ್ಲೀಲ ಪದಗಳನ್ನ ಬಳಸಿದ್ದಾರೆ. ಯತ್ನಳ್ ಅಭಿವೃದ್ಧಿ ಬಗ್ಗೆ ಸವಾಲ್ ಹಾಕಲಿ. ಆದರೆ ಕುಟುಂಬದ ಬಗ್ಗೆ ಹಾಗೆ ಮಾತನಾಡಬಾರದು ಎಂದರು.
ಶಾಸಕ ಯತ್ನಾಳ್ , ಶಿವಾನಂದ ಪಾಟೀಲ್ ಒಳ್ಳೇಯ ಸ್ನೇಹಿತರು. ಆದರೆ ಈಗ ಅವರ ಮಧ್ಯೆ ಏನಾಗಿದೆ ಗೊತ್ತಿಲ್ಲ ಎಂದು ಎಂಬಿ ಪಾಟೀಲ್ ತಿಳಿಸಿದರು.
Key words: challenge, development, Yatnal, Minister, M.B. Patil