ಬೆಂಗಳೂರು,ಮಾರ್ಚ್,18,2026 (www.justkannada.in): ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ ರಾಜ್ಯ ಸರ್ಕಾರದಿಂದಲೇ ಹೆಚ್ಚು ಗೌರವಧನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವೂ ಹೆಚ್ಚು ಗೌರವಧನ ನೀಡಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೇಂದ್ರಕ್ಕೆ ಕುಟುಕಿದರು.
ಅಂಗನವಾಡಿ ಆಶಾಕಾರ್ಯರ್ತೆಯರಿಗೆ ಸೇವಾ ಭದ್ರತೆಯನ್ನ ಕೊಡಬೇಕು ಎಂದು ವಿಧಾನಸಭೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರಿಗೆ ರಾಜ್ಯ ಸರ್ಕಾರ ಹೆಚ್ಚಿನ ಗೌರವಧನ ಕೊಡುತ್ತಿದೆ ಕೇಂದ್ರ ಸರ್ಕಾರ 2,700 ರೂ. ನೀಡುತ್ತಿದ್ದರೆ ರಾಜ್ಯ ಸರ್ಕಾ 9,800 ರೂ ನೀಡುತ್ತಿದೆ. ದೇಶದಲ್ಲೇ ಹೆಚ್ಚು ಗೌರವಧನ ಕೊಡುತ್ತಿರುವುದು ನಾವೇ ಎಂದರು.
ರಾಝ್ಯ ಸರ್ಕಾರ ಹೆಚ್ಚು ಗೌರವ ಧನ ನೀಡುತ್ತಿದೆ ಕೇಂದ್ರವೂ ನೀಡಬೇಕು. ಕೇಂದ್ರ ಸರ್ಕಾರ ಕೇವಲ 2,700 ರೂ. ಮಾತ್ರ ನೀಢುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರವೂ ಕೊಡಲಿ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದಿಂದ 50:50 ಶೇರಿಂಗ್ ಬರಬೇಕಲ್ಲವೇ? ಬರೀ ಫೋಟೊ ಹಾಕಿಕೊಳ್ಳುವುದಕ್ಕೆ ಮಾತ್ರ ಅವರು. ನಮ್ಮ ಫೋಟೊ ಹಾಕಿದರೆ ದುಡ್ಡು ಇಲ್ಲ ಅಂತಾ ಹೇಳಿದರು. ಇದು ಯಾವ ನ್ಯಾಯ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
Key words: Minister, Lakshmi Hebbalkar, Anganwadi workers, state government







