ದೇವೇಗೌಡರು ಸುಮ್ನೆ ನಮ್ಮ ಮನೆಗೆ ಬಂದೋಗಿದ್ರೂ ಗೆಲ್ಲೋರು- ಸಚಿವ ಕೆ.ಎನ್ ರಾಜಣ್ಣ.

ತುಮಕೂರು,ಜನವರಿ,16,2024(www.justkannada.in): ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸೋತಿದ್ದ ವಿಚಾರವನ್ನ ಸಹಕಾರ ಸಚಿವ ಕೆ.ಎನ್ ರಾಜಣ್ಣ ಪ್ರಸ್ತಾಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಕೆ.ಎನ್ ರಾಜಣ್ಣ,  ಹೆಚ್.ಡಿ ದೇವೇಗೌಡರು ಸುಮ್ಮನೆ ನಮ್ಮ ಮನೆಗೆ ಬಂದೋಗಿದ್ರೆ ಗೆಲ್ಲೋರು.  ಸೋಲಿಸುವುದರಿಂದ ಜನ ನಮ್ಮನ್ನು ಗುರುತಿಸುತ್ತಾರೆ ಎಂದಿದ್ದಾರೆ.

ಜೆಡಿಎಸ್ ಅಧಿಕಾರಕ್ಕೆ ಬಂದಾಗ ಬೇರೆ ಜಾತಿಯವರಿಗೆ ಅವಕಾಶ ಸಿಗುತ್ತಾ.  ಬಿಜೆಪಿ ಅಧಿಕಾರಕ್ಕೆ ಬಂದಾಗ ಬೇರೆ ಜಾತಿಯವರಿಗೆ ಅವಕಾಶ ಸಿಗುತ್ತಾ..?  ಎಲ್ಲಾ ಜಾತಿಯವರಿಗೂ ಅವಕಾಶ ಕೊಡೋದು ಕೇವಲ ಕಾಂಗ್ರೆಸ್ ಮಾತ್ರ ಎಂದರು.

Key words: Minister-KN Rajanna –Former PM-HD Devegowda-Lokasbha election.