Friday, July 31, 2026

BDA Apartments

Home Front Page ಹೆಚ್ ಡಿಕೆ ಸಿಎಂ ಮಾಡ್ತೇವೆ ಅಂತಾ ವಿಜಯೇಂದ್ರ, ಅಶೋಕ್ ಹೇಳಲಿ- ದಿನೇಶ್ ಗುಂಡೂರಾವ್ ಸವಾಲು

ಹೆಚ್ ಡಿಕೆ ಸಿಎಂ ಮಾಡ್ತೇವೆ ಅಂತಾ ವಿಜಯೇಂದ್ರ, ಅಶೋಕ್ ಹೇಳಲಿ- ದಿನೇಶ್ ಗುಂಡೂರಾವ್ ಸವಾಲು

ಮಂಗಳೂರು,ಜನವರಿ,26,2026 (www.justkannada.in): ಮುಂದೆ ಅಧಿಕಾರಕ್ಕೆ ಬಂದರೆ ಹೆಚ್ ಡಿ ಕುಮಾರಸ್ವಾಮಿಯನ್ನ ಸಿಎಂ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತೆಉ ವಿಪಕ್ಷ ನಾಯಕ ಆರ್.ಅಶೋಕ್ ಹೇಳಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸವಾಲು ಹಾಕಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ  ಸಚಿವ ದಿನೇಶ್ ಗುಂಡೂರಾವ್,  ಹೆಚ್.ಡಿ ಕುಮಾರಸ್ವಾಮಿಯನ್ನ  ಸಿಎಂ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳಲಿ. ಬಿಜೆಪಿ ಒಬ್ಬ ಮುಖಂಡ ಹೇಳಲಿ. ಸುಮ್ಮನೆ ಜೆಡಿಎಸ್ ನವರು ಹೇಳಿದರೆ ಅದು ಮುಖ್ಯವಲ್ಲ.  ಹೆಚ್ ಡಿ ಕುಮಾರಸ್ವಾಮಿ ಸಿಎಂ ಮಾಡುತ್ತೇವೆ ಎಂದು ಆರ್.ಅಶೋಕ್ ವಿಜಯೇಂದ್ರ ಹೇಳಲಿ ಎಂದು ಟಾಂಗ್ ಕೊಟ್ಟರು.

ಕಳೆದ ಎರಡು ದಿನಗಳ ಹಿಂದೆ ಹಾಸನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಹೆಚ್.ಡಿ ಕುಮಾರಸ್ವಾಮಿ ಸಿಎಂ ವಿಚಾರ ಪ್ರಸ್ತಾಪವಾಗಿತ್ತು.

Key words: BY Vijayendra, R.Ashok, HDK, CM, Minister Dinesh Gundu Rao,