Sunday, September 20, 2026

BDA Apartments

Home Front Page ಖಜಾನೆಯಲ್ಲಿ ಹಣವಿಲ್ಲ, ಶಕ್ತಿಯೋಜನೆಗೆ ಹಣ ತುಂಬಲು ಮೆಟ್ರೋ ದರ ಏರಿಕೆ- ಬಿಜೆಪಿ ಸಂಸದ ಟೀಕೆ

ಖಜಾನೆಯಲ್ಲಿ ಹಣವಿಲ್ಲ, ಶಕ್ತಿಯೋಜನೆಗೆ ಹಣ ತುಂಬಲು ಮೆಟ್ರೋ ದರ ಏರಿಕೆ- ಬಿಜೆಪಿ ಸಂಸದ ಟೀಕೆ

ನವದೆಹಲಿ,ಫೆಬ್ರವರಿ,5,2026 (www.justkannada.in): ಮೆಟ್ರೋ ಪ್ರಯಾಣ ದರವನ್ನ ಶೇ 5ರಷ್ಟು ಏರಿಕೆ ಮಾಡಿರುವ ಕುರಿತು ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಸಂಸದ ಪಿ.ಸಿ ಮೋಹನ್ ಕಿಡಿಕಾರಿದ್ದಾರೆ.

ಈ ಕುರಿತು ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಪಿ.ಸಿ ಮೋಹನ್, ರಾಜ್ಯ ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲದ ಕಾರಣ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿದ್ದಾರೆ.  ಕಳೆದ ಬಾರಿ 71% ಈಗ ಶೇ.5ರಷ್ಟು ಏರಿಕೆ ಮಾಡಿದ್ದಾರೆ ಎಂದು ಟೀಕಿಸಿದರು.

ಬಿಎಂಆರ್ ಸಿಎಲ್ 10 ಸಾವಿರ ಕೋಟಿ ಅನುದಾನಕ್ಕೆ ಬೇಡಿಕೆ ಇಟ್ಟಿತ್ತು.  ಆದರೆ ಬಿಎಂಆರ್ ಸಿಎಲ್ ಗೆ ರಾಜ್ಯ ಸರ್ಕಾರ ಅನುದಾನ ನೀಡಲಿಲ್ಲ.  ಶಕ್ತಿ ಯೋಜನೆಗೆ  ಹಣ ತುಂಬಲು ಮೆಟ್ರೋ ಪ್ರಯಾಣ ದರ ಏರಿಕೆ ಮಾಡತ್ತಿದ್ದಾರೆ.  ಸರ್ಕಾರ ಬಳಿ ಹಣವಿಲ್ಲ.  ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ.  ಮೆಟ್ರೋ ಪ್ರಯಾಣ ದರ ಏರಿಕೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತೆ ಎಂದು ಸಂಸದ ಪಿಸಿ ಮೋಹನ್ ವಾಗ್ದಾಳಿ ನಡೆಸಿದರು.

Key words: no money, metro, fares, increased, BJP, MP