Saturday, September 19, 2026

BDA Apartments

ಸಹಜ ಸ್ಥಿತಿಯತ್ತ ಮರಳಿದ ಮದ್ದೂರು BDA JK_Adv BDA Adv
Home Front Page ಸಹಜ ಸ್ಥಿತಿಯತ್ತ ಮರಳಿದ ಮದ್ದೂರು

ಸಹಜ ಸ್ಥಿತಿಯತ್ತ ಮರಳಿದ ಮದ್ದೂರು

ಮಂಡ್ಯ,ಸೆಪ್ಟಂಬರ್,11,2025 (www.justkannada.in): ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಬೆನ್ನಲ್ಲೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಇದೀಗ ಮದ್ದೂರು ಸಹಜ ಸ್ಥಿತಿಯತ್ತ ಮರಳಿದೆ.

ಮದ್ದೂರಿನಲ್ಲಿ ವರ್ತಕರು ಅಂಗಡಿ ಮುಂಗಟ್ಟುಗಳನ್ನ ತೆರೆಯುತ್ತಿದ್ದು, ಮೂರು ದಿನದ ಬಳಿಕ ಎಂದಿನಂತೆ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಇನ್ನು ಪೊಲೀಸ ಭದ್ರತೆ ಮುಂದುವರೆದಿದ್ದು  ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನ  ನಿಯೋಜನೆ ಮಾಡಲಾಗಿದೆ.

ಭಾನುವಾರ ರಾತ್ರಿ ಮದ್ದೂರಿನ ರಾಮ್ ರಹೀಮ್ ನಗರದ ಮಸೀದಿ ಮುಂಭಾಗ ಗಣೇಶ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಬಳಿಕ ಸೋಮವಾರ ಬಿಜೆಪಿ ಹಿಂದೂಪರ ಸಂಘಟನೆಗಳು  ಬೃಹತ್ ಪ್ರತಿಭಟನೆ ನಡೆಸಿ ಘಟನೆಯನ್ನ ಖಂಡಿಸಿದ್ದವು. ನಿನ್ನೆ ಸಾಮೂಹಿಕ ಗಣೇಶ ವಿಸರ್ಜನಾ ಕಾರ್ಯಕ್ರಮವೂ ನೆರವೇರಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಾರ ವಹಿವಾಟು ಬಂದ್ ಆಗಿತ್ತು.

Key words: Maddur ,riot,  returns, normal Position