ಬಜೆಟ್ ಅಧಿವೇಶನ: ಲೋಕಸಭೆಯ 7 ಸಂಸದರು ಅಮಾನತು

ನವದೆಹಲಿ,ಫೆಬ್ರವರಿ,3,2026 (www.justkannada.in):  ಸಂಸತ್ ಬಜೆಟ್ ಅಧಿವೇಶನ ನಡೆಯುತ್ತಿದ್ದು ಈ ಮಧ್ಯೆ  ಲೋಕಸಭೆಯ 7 ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡಲಾಗಿದೆ.

ಲೋಕಸಭೆಯ ಸ್ಪೀಕರ್  ಮೇಲೆ ಪೇಪರ್ ತೂರಿದ ಆರೋಪದ ಮೇಲೆ ಬಜೆಟ್ ಅಧಿವೇಶನ ಮುಗಿಯುವವರೆಗೂ  ಕಾಂಗ್ರೆಸ್ ನ 7 ಸದಸ್ಯರನ್ನು ಅಮಾನತು ಮಾಡಿ ಲೋಕಸಭೆ ಸ್ಪೀಕರ್ ಆದೇಶಿಸಿದ್ದಾರೆ.

ಕಿರಣ್ ರೆಡ್ಡಿ, ರಾಜ ವಡಿಂಗ್,  ಗುರ್ಜಿತ್ ಔಜ್ಲಾ,  ಮಾಣಿಕಂ ಠಾಕೂರ್,  ವೆಂಕಟರಮಣ, ಹಿಬಿ ಈಡನ್ ಸೇರಿ 7 ಸಂಸದರನ್ನು ಬಜೆಟ್ ಅಧಿವೇಶನ ಮುಗಿಯುವರೆಗೂ ಅಮಾನತು  ಮಾಡಲಾಗಿದೆ.

ಬಜೆಟ್ ಅಧಿವೇಶನದ ಕಲಾಪದ ವೇಳೆ ವಿವಿಧ ವಿಷಯಗಳ ಕುರಿತು ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದವು. ಈ ಹಂತದಲ್ಲಿ ಸಂಸದರು ಸದನದ ಬಾವಿಗೆ ಇಳಿದು ಘೋಷಣೆಗಳನ್ನು ಕೂಗಿ ಕೈಯಲ್ಲಿದ್ದ ಪೇಪರ್ ಗಳನ್ನು ಹರಿದು ಸ್ಪೀಕರ್ ಪೀಠದ ಕಡೆಗೆ ತೂರಿದ್ದಾರೆ.

Key words: Budget Session, 7  Lok Sabha, MP, suspended