ಜಮೀನಿಗೆ ತೆರಳುತ್ತಿದ್ದ ವೇಳೆ ರೈತರ ಮೇಲೆ ಚಿರತೆ ದಾಳಿ…

ಹಾವೇರಿ,ಮಾರ್ಚ್,23,2021(www.justkannada.in): ಜಮೀನಿಗೆ ತೆರಳುತ್ತಿದ್ದ ವೇಳೆ ರೈತರ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.jk

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲ್ಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈತ ಗದಿಗೆಪ್ಪ ಮತ್ತೋರ್ವ ರೈತ ಜಮೀನಿಗೆ ತೆರಳುತ್ತಿದ್ದ ವೇಳೆ ಏಕಾಏಕಿ ಚಿರತೆ ದಾಳಿ ನಡೆಸಿದೆ. ಈ ವೇಳೆ ಇಬ್ಬರು ಸಹ ಚಿರತೆಯೊಂದಿಗೆ ಸೆಣೆಸಾಡಿ ಹತ್ಯೆಗೈದು ಆಪಾಯದಿಂದ ಪಾರಾಗಿದ್ದಾರೆ.Leopard -attack - farmers –farm-haveri

ಚಿರತೆ ದಾಳಿ ವೇಳೆ ರೈತ ಗದಿಗೆಪ್ಪ ಮತ್ತೊಬ್ಬ ರೈತನಿಗೂ ಗಾಯಗಳಾಗಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ರಟ್ಟೀನಹಳ್ಳೀ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Leopard -attack – farmers –farm-haveri