ಸಿದ್ದರಾಮಯ್ಯರನ್ನ ಬಲಿಪಶು ಮಾಡಲು ಕೋಲಾರಕ್ಕೆ ಕರೆತರುತ್ತಿದ್ದಾರೆ- ಸಚಿವ ಕೆ.ಸುಧಾಕರ್ .

ಬೆಂಗಳೂರು,ಜನವರಿ,10,2023(www.justkannada.in):  ಮಾಜಿ ಸಿಎಂ ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಲೇವಡಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಸುಧಾಕರ್,  ಕೋಲಾರದಿಂದ ಸ್ಪರ್ಧೆ ಸಿದ್ದರಾಮಯ್ಯ ರಾಜಕೀಯಕ್ಕೆ ಮಾರಕ. ಕೋಲಾರದಿಂದ ಸ್ಪರ್ಧೆಗೆ ನಮ್ಮ ತಕರಾರಿಲ್ಲ. ಕೆಲ ಜಾತಿ ಇಟ್ಟುಕೊಂಡು ಸಿದ್ಧರಾಮಯ್ಯ ಸ್ಪರ್ಧಿಸುತ್ತಿದ್ದಾರೆ. ಆದರೆ ನಮ್ಮ ಅಭ್ಯರ್ಥಿ ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ಸಿದ್ಧರಾಮಯ್ಯರನ್ನ  ಬಲಿಪಶು ಮಾಡಲು ಕೋಲಾರಕ್ಕೆ ಕರೆದುಕೊಂಡು ಬರುತ್ತಿದ್ದಾರೆ.   ಬೇಳೆ ಬೇಯಿಸಿಕೊಳ್ಳಲು ಕರೆದುಕೊಂಡು ಬರುತ್ತಿದ್ದಾರೆ ಎಂದು ಪರೋಕ್ಷವಾಗಿ  ರಮೇಶ್ ಕುಮಾರ್ ಗೆ ಟಾಂಗ್ ನೀಡಿದರು.

Key words:  kolar- contest-siddaramaiah-minister-sudhakar