ರಸ್ತೆ ಗುಂಡಿಗಳ ಅವಾಂತರ: ಹಿಂದಿನ ಬಿಜೆಪಿ ಸರ್ಕಾರಕ್ಕೂ ತಿವಿದ ಉದ್ಯಮಿ ಕಿರಣ್  ಮಜುಂದಾರ್ ಷಾ

ಬೆಂಗಳೂರು,ಅಕ್ಟೋಬರ್,15,2025 (www.justkannada.in): ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಬಗ್ಗೆ ಕಾಂಗ್ರೆಸ್ ಸರ್ಕಾರದ ವಿರುದ್ದ ಅಸಮಾಧಾನ ಹೊರ ಹಾಕಿದ್ದ ಉದ್ಯಮಿ ಕಿರಣ್  ಮಜುಂದಾರ್ ಷಾ ಇದೀಗ ಹಿಂದಿನ ಬಿಜೆಪಿ ಸರ್ಕಾರಕ್ಕೂ  ತಿವಿದಿದ್ದಾರೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಕಿರಣ್  ಮಜುಂದಾರ್ ಷಾ,  ಹಿಂದಿನ ಸರ್ಕಾರಗಳು ಸಕಾಲದಲ್ಲಿ ಕ್ರಮ ಕೈಗೊಳ್ಳದ ಕಾರಣ ನಾವು ಈ ಸಂಕಷ್ಟ ಪರಿಸ್ಥಿತಿಯಲ್ಲಿದ್ದೇವೆ.  ದಶಕಗಳಿಂದ ಹದಗೆಡುತ್ತಿರುವ ಮೂಲಸೌರ್ಯ ಹಾಗೂ ಕಸ ನಿರ್ವಹಣೆ ಸರಿಪಡಿಸಲು ಈ ಸರ್ಕಾರಕ್ಕೆ ಈಗ ಅವಕಾಶವಿದೆ.

ನಾನು ಬಯಸುತ್ತಿರುವುದು ಕಸ ತೆರವು ರಸ್ತೆ ನಿರ್ಮಾಣ. ಇದನ್ನ ನ ಗ್ರೇಟರ್ ಬೆಂಳೂರು  ಮಾಡಬೇಕಿದೆ.  ಇಲ್ಲಿ ಸರ್ಕಾರ ನಾಗರಿಕರು ಒಂದೇ ಪುಟದಲ್ಲಿ ವರದಿ ಮಾಡನೇಕು  ಎಂದು ಕಿರಣ್ ಮಜುಂದಾರ್ ಶಾ ತಿಳಿಸಿದ್ದಾರೆ.

Key words: Road, pothole, problem, Businessman, Kiran Majumdar  Shah