ಕರ್ನಾಟಕ ಭ್ರಷ್ಟಾಚಾರ ರಾಜ್ಯವಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಮಾನ ಮರ್ಯಾದೆ ಹಾಳು- ಶಾಸಕ ಬಸವರಾಜ ರಾಯರೆಡ್ಡಿ.

ಕೊಪ್ಪಳ.ಆಗಸ್ಟ್,12,2023(www.justkannada.in): ಕರ್ನಾಟಕ ಭ್ರಷ್ಟಾಚಾರ ರಾಜ್ಯವಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಮಾನ ಮರ್ಯಾದೆ ಹಾಳು ಮಾಡುತ್ತಿದ್ದಾರೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಆತಂಕ ವ್ಯಕ್ತಪಡಿಸಿದರು.

ಇಂದು ಮಾತನಾಡಿದ ಶಾಸಕ ಬಸವರಾಜ ರಾಯರೆಡ್ಡಿ,  ಈ ಹಿಂದೆ ಬಿಜೆಪಿ ವಿರುದ್ದ 40 ಪರ್ಸೆಂಟ್ ಕಮಿಷನ್ ಆರೋಪ ಕೇಳಿ ಬಂತಿತ್ತು. ಈಗ  ಕಾಂಗ್ರೆಸ್ ಸರ್ಕಾರದ ವಿರುದ್ಧ ಶೇ 15 ರಷ್ಟು  ಕಮಿಷನ್ ಆರೋಪ ಬಂದಿದೆ.  ಒಟ್ಟಿನಲ್ಲಿ ಕರ್ನಾಟಕ ಭ್ರಷ್ಟ ರಾಜ್ಯವಾಗುತ್ತಿದೆ.  ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜ್ಯದ ಮಾನಮರ್ಯಾದೆಯನ್ನ ಹರಾಜು ಹಾಕುತ್ತಿದ್ದಾರೆ. ಇದರ ಬಗ್ಗೆ ನನಗೂ ನೋವಿದೆ. ಇದನ್ನು ತೊಲಗಿಸುವ ನಿಟ್ಟಿನಲ್ಲಿ ಸಿದ್ಧರಾಮಯ್ಯ ಕೆಲಸ ಮಾಡಬೇಕು.   ಸಿಎಂ ವಿರೋಧ ಪಕ್ಷದವರನ್ನ ಕರೆದು ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದರು.

ನಾನು ಆಯೋಜಿಸಿದ್ದ ಔತಣಕೂಟಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ. ಇನ್ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸಲ್ಲ. ಬಹುಶ:  ಇದೇ ನನ್ನಕೊನೆ ಚುನಾವಣೆಯಾಗಬಹುದು; ಇಂದಿನ ರಾಜಕಾರಣ ನನಗೆ ಒಗ್ಗುವುದಿಲ್ಲ.  ಲೋಕಸಭೆಗೆ ಸ್ಪರ್ಧಿಸಿದರೇ ಸೋಲಿಸುತ್ತಾರೆ ಕರ್ನಾಟಕ ಭ್ರಷ್ಟರಾಜ್ಯವಾಗುತ್ತಿದೆ ಎಂದು ಬಸವರಾಜ ರಾಯರೆಡ್ಡಿ ತಿಳಿಸಿದರು.

Key words: Karnataka -becoming – state – corruption-MLA -Basavaraja Rayareddy.