ನಾಳೆ ನೀವು ಬೀದಿ ಪಾಲಾಗುತ್ತಿರಾ: ಇದರಲ್ಲಿ ಅನುಮಾನವೇ ಬೇಡ- ಸಿಎಂ ಬಿಎಸ್ ವೈಗೆ ಪ್ರೊ. ಮಹೇಶ್ ಚಂದ್ರಗುರು ಎಚ್ಚರಿಕೆ….

ಮೈಸೂರು,ಡಿಸೆಂಬರ್,4,2020(www.justkannada.in):  ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿ ಅನುದಾನ ನೀಡಿರುವ ಸಿಎಂ ಬಿಎಸ್ ಯಡಿಯೂರಪ್ಪಗೆ  ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಎಚ್ಚರಿಕೆ ನೀಡಿದ್ದಾರೆ.logo-justkannada-mysore

ಮರಾಠರ ಮತ ಪಡೆಯಲು ಹೋಗಿ ಅಖಂಡ ಕನ್ನಡಿಗರ ವಿಶ್ವಾಸವನ್ನ ಕಳೆದುಕೊಳ್ಳುತ್ತಾರೆ. ನಾಳೆ ನೀವು ಬೀದಿ ಪಾಲಾಗುತ್ತಿರಾ. ಇದರಲ್ಲಿ ಅನುಮಾನವೇ ಬೇಡ ಎಂದು ಪ್ರೊ.ಮಹೇಶ್ ಚಂದ್ರಗುರು ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಪ್ರೊ.ಮಹೇಶ್ ಚಂದ್ರಗುರು, ಮರಾಠ ಪ್ರಾಧಿಕಾರ ರಚನೆಯಿಂದ ಅಖಂಡ‌ ಕರ್ನಾಟಕದ ಜನತೆಯ ಹಿತಾಸಕ್ತಿಗೆ ತೊಂದರೆ ಆಗುತ್ತದೆ. ಯಡಿಯೂರಪ್ಪ ನವರು ತಮ್ಮ ಅವಿವೇಕವನ್ನ ಹೊಣಗೇಡಿತನವನ್ನ ಪ್ರದರ್ಶನ ಮಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಅಲ್ಲಿನ ಮರಾಠರ ಬೆಂಬಲ ಪಡೆದು ಗೆಲ್ಲಲು ಹೊರಟ್ಟಿದ್ದಾರೆ. ಇದು ಅತ್ಯಂತ ಕೆಟ್ಟ ತಂತ್ರಗಾರಿಕೆ. ಇವರು ಖಂಡಿತ ಉದ್ಧಾರ ಆಗಲ್ಲ. ಮರಾಠರ ಮತ ಪಡೆಯಲು ಹೋಗಿ ಅಖಂಡ ಕನ್ನಡಿಗರ ವಿಶ್ವಾಸವನ್ನ ಕಳೆದುಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ನೀವು ನಮ್ಮ‌ಮೇಲೆ ಯಾವುದೆ ಕಾರಣಕ್ಕೂ ದಾಳಿ ಮಾಡಲು ಆಗಲ್ಲ. ನಾಳೆ ನಡೆಯುತ್ತಿರುವ ಕರ್ನಾಟಕ ಬಂದ್ ಕೆಟ್ಟ ವ್ಯವಸ್ಥೆ ವಿರುದ್ಧ ಸಂಘಟನೆ ಆಗಿರುವ ಒಂದು ಕಾರ್ಯಕ್ರಮ ಎಂದು ಪ್ರೊ.ಮಹೇಶ್ ಚಂದ್ರಗುರು ಹೇಳಿದರು.

ಬಂದ್ ಹಿಂದ ಹಿಂದೆ ಸರಿದ ಕೆಲ ಸಂಘಟನೆಗಳ ನಿಲುವಿನ ಕುರಿತು ತೀಕ್ಷ್ಣ ಪ್ರತಿಕ್ರಿಯೆ….

ನಾಳಿನ ಬಂದ್ ಗೆ ಹಿಂದೆ ಸರಿದ ಕೆಲವು ಸಂಘಟನೆಗಳ ನಿಲುವಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಪ್ರೊ. ಮಹೇಶ್ ಚಂದ್ರಗುರು, ಗುಲಾಮರು, ಅವಕಾಶವಾದಿಗಳು ಎಲ್ಲ ಕಾಲದಲ್ಲೂ ಇರುತ್ತಾರೆ. ನಾಳಿನ ಬಂದ್ ಗೆ ಎಲ್ಲ ಸಂಘಟನೆಗಳು, ಎಲ್ಲ ಜಾತಿ ಧರ್ಮದವರು ಈ ಮಣ್ಣಿನ ನೆಲದವರು ಬೆಂಬಲಿಸಬೇಕು. ಕನ್ನಡಪರ ಸಂಘಟನೆಗಳಿಗೆ ಎಲ್ಲ ಸಂಘಟನೆಗಳು ನೆರವು ನೀಡಿದ್ರೆ ಮಾತ್ರ ಬಂದ್ ಯಶಸ್ವಿಯಾಗಲು ಸಾಧ್ಯ. ಆದರೆ ಕೆಲವರು ಹಿಂದೆ ಸರಿದರೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.karnataka-bandh-dec5-cm-bs-yeddyurappa-pro-mahesh-chandraguru-warns

ದೆಹಲಿಯ ರೈತರ ಪ್ರತಿಭಟನೆಯನ್ನ ಪಾರ್ಲಿಮೆಂಟ್ ಚಲೋ ಎಂದೇ ಕರೆಯಬೇಕು. ಪಾರ್ಲಿಮೆಂಟ್ ಮುತ್ತಿಗೆ ಅವಶ್ಯಕತೆ ಇಲ್ಲ, ಕೇಂದ್ರ ಸರ್ಕಾರ ರೈತರ  ಪ್ರತಿಭಟನೆಗೆ ಮಣಿದು ಅವರ ಸಮಸ್ಯೆಗಳ ಈಡೇರಿಸಬೇಕು. ಶೂದ್ರ ವರ್ಗ ಈ ದೇಶದ ಆಡಳಿತ ಚುಕ್ಕಾಣಿ ಹಿಡಿಯುವವರೆಗೂ ಈ ಹೋರಾಟ ಅಗತ್ಯ ಎಂದು ಪ್ರೊ. ಮಹೇಶ್ ಚಂದ್ರಗುರು ತಿಳಿಸಿದರು.

Key words: Karnataka bandh-dec5-cm bs yeddyurappa-Pro. Mahesh Chandraguru –warns