Saturday, August 8, 2026

BDA Apartments

Home Front Page ಮೈಸೂರಿನಲ್ಲಿ ಕನಕ ಜಯಂತಿ ಆಚರಣೆ: ಗಮನ ಸೆಳೆದ ಗ್ಯಾರಂಟಿ ಯೋಜನೆಗಳ ಟ್ಯಾಬ್ಲೋ.

ಮೈಸೂರಿನಲ್ಲಿ ಕನಕ ಜಯಂತಿ ಆಚರಣೆ: ಗಮನ ಸೆಳೆದ ಗ್ಯಾರಂಟಿ ಯೋಜನೆಗಳ ಟ್ಯಾಬ್ಲೋ.

ಮೈಸೂರು,ನವೆಂಬರ್,30,2023(www.justkannada.in):  ಮೈಸೂರು ಜಿಲ್ಲಾಡಳಿತ ವತಿಯಿಂದ ಇಂದು 536ನೇ ಕನಕ ಜಯಂತಿ ಆಚರಣೆ ಮಾಡಲಾಯಿತು.

ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕನಕದಾಸರ ಪ್ರತಿಮೆಗೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ನಂತರ ಕನಕದಾಸರ ಪ್ರತಿಮೆ ಮೆರವಣಿಗೆಗೆ ಮೈಸೂರು ಜಿಲ್ಲಾಧಿಕಾರಿ ಡಾ ಕೆವಿ ರಾಜೇಂದ್ರ ಚಾಲನೆ ನೀಡಿದರು. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕಲಾ ಮಂದಿರ ತನಕ ಮೆರವಣಿಗೆ ಸಾಗಿದ್ದು, ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗಿದ್ದವು.

ಕನಕದಾಸರ ಜಯಂತಿ ಮೆರವಣಿಗೆಯಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಟ್ಯಾಬ್ಲೋವನ್ನ ಪ್ರದರ್ಶಿಸಲಾಗಿದ್ದು ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು. ಈ ವೇಳೆ ಮಾಜಿ ಶಾಸಕ ಆಶ್ರಯ ಸಮಿತಿ ಅಧ್ಯಕ್ಷ ಡಾ ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಎಂಕೆ ಸೋಮಶೇಖರ್ ,ಮಾಜಿ ಜಿಪಂ ಅಧ್ಯಕ್ಷ ಮರೀಗೌಡ, ಜಿಪಂ ಸಿಇಒ ಗಾಯತ್ರಿ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

Key words: Kanaka Jayanti -Celebrations – Mysore