Friday, September 18, 2026

BDA Apartments

ರೈತರಿಗೆ ಸೇರಬೇಕಿದ್ದ 2 ಸಾವಿರ ಕೆಜಿ ಯೂರಿಯಾ ಅಕ್ರಮ ಮಾರಾಟ: DRI ದಾಳಿ, ಜಪ್ತಿ BDA JK_...
Home Front Page ರೈತರಿಗೆ ಸೇರಬೇಕಿದ್ದ 2 ಸಾವಿರ ಕೆಜಿ ಯೂರಿಯಾ ಅಕ್ರಮ ಮಾರಾಟ: DRI ದಾಳಿ, ಜಪ್ತಿ

ರೈತರಿಗೆ ಸೇರಬೇಕಿದ್ದ 2 ಸಾವಿರ ಕೆಜಿ ಯೂರಿಯಾ ಅಕ್ರಮ ಮಾರಾಟ: DRI ದಾಳಿ, ಜಪ್ತಿ

ಬೆಂಗಳೂರು, ಡಿಸೆಂಬರ್,​​ 16,2025 (www.justkannada.in):   ರೈತರಿಗೆ ಹಂಚಿಕೆಯಾಗಬೇಕಿದ್ದ ಯೂರಿಯಾ ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿದ್ದ  2ಸಾವಿರ ಕೆ.ಜಿ ಯೂರಿಯವನ್ನು  ಡಿಆರ್ ಐ ದಾಳಿ ನಡೆಸಿ ಜಪ್ತಿ ಮಾಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗೆಜ್ಜಗದಹಳ್ಳಿ ಬಳಿ ಅಕ್ರಮವಾಗಿ ಸಂಗ್ರಹಿಸಿದ್ದ 2 ಸಾವಿರ ಕೆ.ಜಿ  ಯೂರಿಯಾವನ್ನು ಡಿಆರ್ ಐ ಜಪ್ತಿ ಮಾಡಿದೆ. 6 ತಿಂಗಳ ಹಿಂದೆ ತಜೀರ್ ಖಾನ್ ಯೂಸುಫ್ ಎಂಬವರು ತಿಂಗಳಿಗೆ 40 ಸಾವಿರಕ್ಕೆ ಶೆಡ್​​ ಬಾಡಿಗೆಗೆ ಪಡೆದಿದ್ದರು. ಇಲ್ಲಿಂದ ಯೂರಿಯಾ ಪ್ಯಾಕ್ ಮಾಡಿ ತಮಿಳುನಾಡಿಗೆ ಕಳುಹಿಸಲಾಗುತ್ತಿತ್ತು. ತಮಿಳುನಾಡಿನಲ್ಲಿ ದಾಳಿ ವೇಳೆ ಡಿಆರ್ ಐ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ.

ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಡುತ್ತಿದ್ದ  45 ಕೆಜಿ ತೂಕದ ಯೂರಿಯಾವನ್ನು ಶೆಡ್ ​ಗಳಿಗೆ ತಂದು ದಾಸ್ತಾನು ಮಾಡಿ ಬಳಿಕ ಅದನ್ನು ಬೇರೆ ಚೀಲಗಳಿಗೆ ತುಂಬಿ 50 ಕೆಜಿ ಚೀಲವನ್ನಾಗಿ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಕೇವಲ 266 ರೂ.ಗೆ ರೈತರಿಗೆ ನೀಡಬೇಕಿದ್ದ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ 2000 ರೂ.ಗೆ ದಂಧೆಕೋರರು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇದೀಗ ಡಿಆರ್ ಐ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಯೂರಿಯಾವನ್ನ ವಶಕ್ಕೆ ಪಡೆದಿದ್ದಾರೆ.

Key words: Illegal sale,  urea, farmers, DRI, raids, seizes