Friday, August 14, 2026

BDA Apartments

Home Front Page ಸವಾಲುಗಳ ಮಧ್ಯೆ 3 ವರ್ಷದಿಂದ ಶಾಂತಿ ಕಾಪಾಡುವಲ್ಲಿ ಯಶಸ್ವಿ- ಗೃಹ ಸಚಿವ ಪರಮೇಶ್ವರ್

ಸವಾಲುಗಳ ಮಧ್ಯೆ 3 ವರ್ಷದಿಂದ ಶಾಂತಿ ಕಾಪಾಡುವಲ್ಲಿ ಯಶಸ್ವಿ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಏಪ್ರಿಲ್,2,2026 (www.justkannada.in): ರಾಜ್ಯದಲ್ಲಿ ಸವಾಲುಗಳ ಮಧ್ಯೆ ಮೂರು ವರ್ಷದಿಂದ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾಗಿದ್ದೇವೆ- ಗೃಹ ಸಚಿವ ಡಾ.ಜಿ. ಪರಮೇಶ್ವರ್ ನುಡಿದರು.

ಇಂದು ಬೆಂಗಳೂರಿನ ಕೋರಮಂಗಲದ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ “ಪೊಲೀಸ್ ಧ್ವಜ ದಿನಾಚರಣೆ” ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್,  ಶಾಂತಿ ನೆಮ್ಮದಿಯಿಂದಿರಬೇಕೆಂದು ಪೊಲೀಸರು ಶ್ರಮ ಪಡುತ್ತಿದ್ದಾರೆ. ಉತ್ತಮ ಇಲಾಖೆ ಎಂದು ಪೊಲೀಸ್ ಇಲಾಖೆ ಹೆಸರಾಗಿದೆ.  ಈ ಬಗ್ಗೆ ವಿಶೇಷ ಹೆಮ್ಮೆಯಿದೆ. ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಎಂದರು.

ಕವಿತಾಳ ಠಾಣೆಗೆ ದೇಶದ 3ನೇ ಅತ್ಯುತ್ತಮ ಠಾಣೆ ಎಂದು ಬಿರುದು ಸಿಕ್ಕಿದೆ  ಎಲ್ಲಾ ಪೊಲೀಸ್ ಠಾಣೆಗಳೂ ಕೂಡ ಕವಿತಾಳ ಠಾಣೆ ರೀತಿ ಆಗಬೇಕು ಡ್ರಗ್ಸ್ ಜಾಲ ನಾಶ ಮಾಡಲು ಸದನದಲ್ಲಿ ಘೋಷಣೆ ಮಾಡಿದ್ದೇವೆ ಸೈಬರ್ ಕ್ರೈ ಕಂಟ್ರೊಲ್ ಗೆ ಡಿಜಿ ಪೋಸ್ಟ್  ಕ್ರಿಯೇಟ್ ಮಾಡಿದ್ದೇವೆ.  ಈಗಾಗಲೇ ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಿದ್ದೇವೆ. ಪೊಲೀಸ್ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಯಾವಾಗಲೂ ಪ್ರೋತ್ಸಾಹ ನೀಡಿದ್ದಾರೆ  ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.

Key words: Home Minister, Parameshwar, Successful, peace