ಬೆಂಗಳೂರು,ಜುಲೈ,29,2025 (www.justkannada.in): ಮಲ್ಲಿಕಾರ್ಜುನ ಖರ್ಗೆ ಎಲ್ಲಾ ಹುದ್ದೆಗಳಿಗೂ ಸಮರ್ಥರು. ಅವರು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಅಂದರೆ ತಪ್ಪೇನಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸಿಎಂ ಸ್ಥಾನ ಕೈತಪ್ಪಿದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಪಕ್ಷದಲ್ಲಿ ಖರ್ಗೆ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಯಾರು ಸಿಎಂ ಆಗಬೇಕೆಂದು ನಿರ್ಧಾರ ಮಾಡುವುದೇ ಖರ್ಗೆ. ರಾಜ್ಯರಾಜಕಾರಣಕ್ಕೆ ಬರ್ತಿನಿ ಅಂದರೆ ತಪ್ಪು ಭಾವಿಸುವ ಅವಶ್ಯಕತೆ ಇಲ್ಲ. ಮಲ್ಲಿಕಾರ್ಜುನ ಖರ್ಗೆ ರಾಜ್ಯರಾಜಕಾರಣಕ್ಕೆ ಬರುತ್ತೇನೆ ಅಂದರೆ ತಪ್ಪೇನಿಲ್ಲ. ಖರ್ಗೆ ಅವರು ಎಲ್ಲಾ ಹುದ್ದೆಗಳಿಗೂ ಸಮರ್ಥರು. ಖರ್ಗೆಯವರು ನಮ್ಮ ಪಕ್ಷದಲ್ಲಿ ನಿರ್ಣಾಯಕ ಸ್ಥಾನದಲ್ಲಿದ್ದಾರೆ ಎಂದರು.
ಇಂದು ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಸಭೆಯಲ್ಲಿ ಅನುದಾನ, ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಾರೆ. 2017-18ರಲ್ಲೂ ಇದೇ ರೀತಿ ಸಭೆಗಳು ಆಗಿದ್ದವು ಸಿಎಂ ಸಭೆಯಲ್ಲಿ ಡಿಸಿಎಂ ಸಹ ಇರುತ್ತಾರೆ ಅಂದುಕೊಂಡಿದ್ದೇವೆ. ಡಿಕೆ ಶಿವಕುಮಾರ್ ಗೆ ಸ್ವಲ್ಪ ಹುಷಾರಿಲ್ಲ ಹಾಗಾಗಿ ಬರಲ್ಲ ಅನ್ನಿಸುತ್ತೆ ಎಂದರು.
Key words: Mallikarjuna Kharge, state politics, Home Minister, Parameshwar