Sunday, September 20, 2026

BDA Apartments

Home Front Page ಹೆಣ್ಣು ಮಕ್ಕಳ ಮುಖ ತೆಗಿಸಿ ನೋಡೋ ಆಸೆ ಯಾಕೆ..?  ಹಿಜಾಬ್ ವಿವಾದ ಕುರಿತು ಸಿಎಂ ಇಬ್ರಾಹಿಂ...

ಹೆಣ್ಣು ಮಕ್ಕಳ ಮುಖ ತೆಗಿಸಿ ನೋಡೋ ಆಸೆ ಯಾಕೆ..?  ಹಿಜಾಬ್ ವಿವಾದ ಕುರಿತು ಸಿಎಂ ಇಬ್ರಾಹಿಂ ಆಕ್ರೋಶ.

ಬೆಂಗಳೂರು,ಫೆಬ್ರವರಿ,5,2022(www.justkannada.in):  ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಹಿಜಾಬ್ ವಿವಾದಕ್ಕೆ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಲೇಜಿಗೆ ಹೋಗೋದು ಓದೋಕೊ..? ಬ್ಯೂಟಿ ನೋಡೋಕೋ..?  ಹೆಣ್ಣು ಮಕ್ಕಳ ಮುಖ ತೆಗಿಸಿ ನೋಡೋ ಆಸೆ ಯಾಕೆ..?  ಎಂದು ಸಿಎಂ ಇಬ್ರಾಹಿಂ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಇಬ್ರಾಹಿಂ , ಬಿಜೆಪಿಯವರಿಗೆ ಯಾವುದೇ ವಿವಾದದಲ್ಲೂ ಯಶಸ್ಸು ಸಿಗುತ್ತಿಲ್ಲ.  ಹೀಗಾಗಿ ಹಿಜಾಬ್ ವಿವಾದ ಶುರು ಮಾಡಿದ್ದಾರೆ. ಹಿಜಾಬ್ ಬಹಳ ವರ್ಷದಿಂದ ನಡೆದುಕೊಂಡು ಬಂದಿದೆ. ಮೈಸೂರು ಮಹಾರಾಜರ ಕಾಲದಿಂದಲೂ ಹಿಜಾಬ್  ಇದೆ. ಸಿಎಂ ಬೊಮ್ಮಾಯಿ ಕೂಡ ಹಿಜಾಬ್ ಧರಿಸಿದ್ದಾರೆ. ವಿವಾದ ಸೃಷ್ಠಿಸುವಲ್ಲಿ ಸರ್ಕಾರ ಮುಂಚೂಣಿಯಲ್ಲಿದೆ. ಎಲ್ಲಿಗೆ ಈ ರಾಜ್ಯ ತೆಗೆದುಕೊಂಡು ಹೋಗ್ತೀರಿ. ಎಷ್ಟು ದಿನ ಇರ್ತೀರಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

JDS- join- issue-CM Ibrahim- clarified.
ಕೃಪೆ-internet

ಉತ್ತರ ಕರ್ನಾಟಕದಲ್ಲಿ ಮಹಿಳೆಯರು ಸೀರೆಯನ್ನ ತಲೆಯ ಮೇಲೆ ಹಾಕಿಕೊಳ್ತಾರೆ. ಬಿಜೆಪಿಗೆ ಇದೇ ಕೊನೆ ಅವಕಾಶ. ಗಾಳಿ ಬದಲಾಗುತ್ತಿದೆ. ಕೋರ್ಟ್ ಆದೇಶದವರೆಗೂ ಯಥಾಸ್ಥಿತಿ ಕಾಪಾಡಿ  ಎಂದು ಸಿಎಂ ಇಬ್ರಾಹಿಂ ತಿಳಿಸಿದರು.

Key words: hijab-MLC-CM ibrahim