Sunday, August 2, 2026

BDA Apartments

Home Front Page ರಾಜ್ಯದಲ್ಲಿ ಭಾರಿ ಮಳೆ ಹಾನಿ ಹಿನ್ನೆಲೆ: ಆ.10 ರಂದು ಸಚಿವರ ಜತೆ ಪ್ರಧಾನಿ ಮೋದಿ ಸಭೆ,...

ರಾಜ್ಯದಲ್ಲಿ ಭಾರಿ ಮಳೆ ಹಾನಿ ಹಿನ್ನೆಲೆ: ಆ.10 ರಂದು ಸಚಿವರ ಜತೆ ಪ್ರಧಾನಿ ಮೋದಿ ಸಭೆ, ಚರ್ಚೆ…

ಬೆಂಗಳೂರು,ಆ,8,2020(www.justkannada.in):  ರಾಜ್ಯದಲ್ಲಿ ಸುರಿದ ಮಹಾಮಳೆಗೆ ಕೊಡಗು, ಮೈಸೂರು, ಉಡುಪಿ, ಬೆಳಗಾವಿ ಸೇರಿ ಹಲವು ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿ ತತ್ತರಿಸಿವೆ. ಹೀಗಾಗಿ ಆಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು, ರಾಜ್ಯದ ಪರಿಸ್ಥಿತಿ ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ.jk-logo-justkannada-logo

ರಾಜ್ಯದಲ್ಲಿ ಭಾರಿಮಳೆಯಿಂದ ಹಾನಿ ಹಿನ್ನೆಲೆ ಸೋಮವಾರ ರಾಜ್ಯದ ಸಚಿವರ ಜತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.  ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಭೆಯಲ್ಲಿ ಪಾಲ್ಗೊಂಡು ಮಳೆ ಹಾನಿ ಕುರಿತು ಮಾಹಿತಿ ನೀಡಲಿದ್ದಾರೆ.heavy-rain-prime-minister-narendra-modi-meeting-minister-10-thaugust

ಸೋಮವಾರ ಬೆಳಿಗ್ಗೆ 11 ಗಂಟೆಗೆ ಸಭೆ ನಡೆಯಲಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಮುಂದೆ ಪ್ರಸ್ತಾಪಿಸಬೇಕಾಗಿರುವ ಅಂಶಗಳ ಕುರಿತು ನಾಳೆ ಸಚಿವರು ಚರ್ಚೆ ನಡೆಸಿ ಸಿದ್ಧತೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Key words:  heavy rain –  Prime Minister-narendra Modi- meeting – minister – 10 thaugust