Friday, September 18, 2026

BDA Apartments

ಚುನಾವಣಾಧಿಕಾರಿಗಳು ದಾಳಿ: ಹೆಚ್.ಡಿಕೆ ಆಯೋಜಿಸಿದ್ದ ‘ಔತಣ ಕೂಟ’ ರದ್ದು BDA JK_Adv BDA Adv
Home Election 2024 ಚುನಾವಣಾಧಿಕಾರಿಗಳು ದಾಳಿ: ಹೆಚ್.ಡಿಕೆ ಆಯೋಜಿಸಿದ್ದ ‘ಔತಣ ಕೂಟ’ ರದ್ದು.

ಚುನಾವಣಾಧಿಕಾರಿಗಳು ದಾಳಿ: ಹೆಚ್.ಡಿಕೆ ಆಯೋಜಿಸಿದ್ದ ‘ಔತಣ ಕೂಟ’ ರದ್ದು.

ರಾಮನಗರ,ಏಪ್ರಿಲ್,10,2024 (www.justkannada.in): ಬಿಡದಿಯ ಕೇತಗಾನಹಳ್ಳಿಯಲ್ಲಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ತೋಟದ ಮನೆ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.

ಇಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು  ತೋಟದ ಮನೆಯಲ್ಲಿ ಮೈತ್ರಿ ನಾಯಕರಿಗೆ  ಔತಣ ಕೂಟ ಆಯೋಜಿಸಿದ್ದರು. ಆದರೆ ಅನುಮತಿ ಪಡೆಯದೇ ಆಯೋಜಿಸಿದ್ದು, ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು ಔತಣಕೂಟ ರದ್ದಾಗಿದೆ ಎನ್ನಲಾಗಿದೆ.ಚುನಾವಣಾಧಿಕಾರಿಗಳು ದಾಳಿ hdk hdk 2

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಕುಮಾರಸ್ವಾಮಿ ಅಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರೆ ಅದಕ್ಕೆ ಅನುಮತಿ ಪಡೆಯಬೇಕು. ಅವರು ಅಲ್ಲಿ ಪ್ರಚಾರ ನಡೆಸುತ್ತಿಲ್ಲ. ಮನೆಗೆ ಊಟಕ್ಕೆ ಹೋಗಿದ್ದಾರೆ. ಯುಗಾದಿ ಹಬ್ಬಕ್ಕೆ ಊಟಕ್ಕೆಂದು ಮನೆಗೆ ಹೋಗಲು ಪರ್ಮಿಷನ್ ತೆಗೆದುಕೊಳ್ಳಬೇಕಾ? ಹಾಗಂತ ಯಾವ ಕಾನೂನಿನಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

Key words: HDK,  raid, Election Officers