ಗೃಹಜ್ಯೋತಿ  ಯೋಜನೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದೂಡಿಕೆ.

ಬೆಂಗಳೂರು,ಜೂನ್,14,2023(www.justkannada.in): ಕಾಂಗ್ರೆಸ್ ಸರ್ಕಾರದ  ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ  ಗೃಹಜ್ಯೋತಿ  ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನ ಮುಂದೂಡಿಕೆ ಮಾಡಲಾಗಿದೆ.  ತಾಂತ್ರಿಕ ದೋಷದಿಂದಾಗಿ ಗೃಹಜ್ಯೋತಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನ ಸರ್ಕಾರ ಮುಂದೂಡಿಕೆ ಮಾಡಿದೆ ಎನ್ನಲಗಿದೆ. ಜೂನ್ 15ರಿಂದ ಗೃಹಜ್ಯೋತಿ ಅರ್ಜಿ ಸಲ್ಲಿಕೆ ಆರಂಭವಾಗಬೇಕಿತ್ತು. ಆದರೆ ಕೆಲ ತಾಂತ್ರಿಕ ದೋಷದಿಂದಾಗಿ  ಜೂನ್ 18ಕ್ಕೆ ಅರ್ಜಿ ಸಲ್ಲಿಕೆ  ಪ್ರಕ್ರಿಯೆಯನ್ನ ಸರ್ಕಾರ ಮುಂದೂಡಿದೆ.

Key words: Griha Jyothi- Yojana -Application -Submission -Process -Postponed.