Thursday, August 13, 2026

BDA Apartments

Home Front Page ಷರತ್ತುಗಳು ಇಲ್ಲದೇ ಸರ್ಕಾರಿ ಯೋಜನೆ ಜಾರಿ ಸಾಧ್ಯವಿಲ್ಲ- ಸಚಿವ ಪ್ರಿಯಾಂಕ್ ಖರ್ಗೆ.

ಷರತ್ತುಗಳು ಇಲ್ಲದೇ ಸರ್ಕಾರಿ ಯೋಜನೆ ಜಾರಿ ಸಾಧ್ಯವಿಲ್ಲ- ಸಚಿವ ಪ್ರಿಯಾಂಕ್ ಖರ್ಗೆ.

ಬೆಂಗಳೂರು,ಜೂನ್,2,2023(www.justkannada.in):  5 ಗ್ಯಾರಂಟಿ ಯೋಜನೆ ಜಾರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಷರತ್ತುಗಳನ್ನ ವಿಧಿಸಲು ಮುಂದಾಗಿರುವ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು  ಟೀಕಿಸುತ್ತಿರುವ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.

ಷರತ್ತುಗಳು ಇಲ್ಲದೆ ಸರ್ಕಾರಿ ಯೋಜನೆ  ಜಾರಿ  ಮಾಡಲು ಸಾಧ್ಯವಿಲ್ಲ. ಬಿಪಿಎಲ್ ಕಾರ್ಡ್ ಇರುವವರಿಗೆ ಮೊದಲ  ಆದ್ಯತೆ ನೀಡಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸಂಪುಟ ಸಭೆಯಲ್ಲಿ ಗ್ಯಾರಂಟಿಗಳ ಬಗ್ಗೆ ಚರ್ಚೆ ಮಾಡುತ್ತೇವೆ.  ಗ್ಯಾರಂಟಿ ಬಗ್ಗೆ ಸಿಎಂ ಹಲವು ಸಭೆ ನಡೆಸಿದ್ದಾರೆ. ಅಧಿಕಾರಿಗಳು ಹಾಗೂ ಸಚಿವರ ಜತೆಗೆ ಸಿಎಂ ಚರ್ಚಿಸಿದ್ದಾರೆ.  ಇಂದಿನ ಸಂಫುಟ ಸಭೆಯಲ್ಲಿ ಅಂತಿಮವಾಗುತ್ತೆ ಆರ್ಥಿಕ ನೀಲನಕ್ಷೆ, ಅನುಷ್ಟಾನದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

Key words: Government -scheme -cannot – implemented –without- conditions – Minister- Priyank Kharge.