ಹೂವಿನ ಗಿಡದ ಮಧ್ಯೆ ಗಾಂಜಾ ಬೆಳೆದಿದ್ದ ಆರೋಪಿ ಅರೆಸ್ಟ್…

ತುಮಕೂರು,ಅಕ್ಟೋಬರ್,7,2020(www.justkannada.in): ಹೂವಿನ ಗಿಡದ ಮಧ್ಯೆ ಗಾಂಜಾ ಬೆಳೆದಿದ್ದ ಆರೋಪಿಯನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಜೆಟ್ಟಿಅಗ್ರಹಾರ ನಿವಾಸಿ ಹನುಮಂತರಾಯಪ್ಪ ಬಂಧಿತ ಆರೋಪಿ. ಬಂಧಿತನಿಂದ ಪೊಲೀಸರು 9 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿ ಹನುಮಂತರಾಯಪ್ಪ ಹೂವಿನ ಗಿಡದ ಮಧ್ಯೆ ಗಾಂಜಾ ಬೆಳೆದಿದ್ದನು. ಈ ಕುರಿತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.tumakur-arrest-marijuana-flower-plants

Key words: tumakur- Arrest-marijuana – flower plants