ರಾಜ್ಯ ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲ: ಆಡಳಿತ ವ್ಯವಸ್ಥೆ ಸಂಪೂರ್ಣಕುಸಿತ- ಬಿ.ಕೆ ಹರಿ ಪ್ರಸಾದ್ ವಾಗ್ದಾಳಿ.

kannada t-shirts

ಮೈಸೂರು,ಆಗಸ್ಟ್,25,2022(www.justkannada.in):  ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಬಿ.ಕೆ ಹರಿಪ್ರಸಾದ್, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ರಾಜ್ಯ ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ. ಕಾಂಗ್ರೆಸ್ ನವರು ಇತಿಹಾಸ ಸೃಷ್ಟಿ ಮಾಡಿದ್ದಾರೆ. ಆದರೆ ಬಿಜೆಪಿಯವರು ನೈಜ ಇತಿಹಾಸವನ್ನು ತಿರುಚಿದ್ದಾರೆ ಎಂದು ಆರೋಪಿಸಿದರು.

ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ. ಅವರು ಬ್ರಿಟಿಷರ ಬೂಟನ್ನು ನೆಕ್ಕಿದ್ದರು.ಆರು ಬಾರಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ಒಂದೇ ಒಂದು ಉದಾಹರಣೆ ಇದ್ದರೆ ಕೊಡಲಿ ಸಾಕು. ಮಹಾತ್ಮಗಾಂಧೀಜಿ ಕೊಂದಂತಹ ಗೋಡ್ಸೆ ಬಿಟ್ಟರೇ ಬೇರಾವ ಮಹಾಪುರುಷ ಇವರಿಗೆ ಸಿಕ್ಕಿರಲಿಲ್ಲ. ಇದೀಗ ಸಾವರ್ಕರ್ ಹೆಸರೇಳಿಕೊಂಡು ತಿರುಗಾಡುತ್ತಿದ್ದಾರೆ. ಸಾವರ್ಕರ್ ಅಪ್ಪಟ ನಾಸ್ತಿಕ. ನಾಸ್ತಿಕ ಎಂದು ಅವರ ಆತ್ಮಚರಿತ್ರೆಯಲ್ಲೇ ಬರೆದುಕೊಂಡಿದ್ದಾರೆ. ನಾಸ್ತಿಕ ಸಾವರ್ಕರ್ ಭಾವಚಿತ್ರವನ್ನು ಗಣೇಶೋತ್ಸವದಲ್ಲಿ ಇಡುವ ಮೂಲಕ ಹಿಂದೂ ಧರ್ಮಕ್ಕೆ ಅಪಮಾನ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿಯಿಂದ ಭಾರತ್ ತೋಡೋ, ಕಾಂಗ್ರೆಸ್ ನಿಂದ ಭಾರತ್ ಜೋಡೋ ಯಾತ್ರೆ- ಸಲೀಂ ಅಹಮದ್.

ಇನ್ನು ಬಿಜೆಪಿ ಸರ್ಕಾರದ ವಿರುದ‍್ಧ ಹರಿಹಾಯ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್,  ಬಿಜೆಪಿ ಭಾರತ್ ತೋಡೋ ಮಾಡುತ್ತಿದೆ.  ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮಾಡುತ್ತಿದೆ. ಭಾರತ್ ಜೋಡೋ ದೇಶದ ಇತಿಹಾಸದಲ್ಲೇ ಅತಿದೊಡ್ಡ ಪಾದಯಾತ್ರೆ. ಕರ್ನಾಟಕದಲ್ಲಿ 21 ದಿನ ಯಾತ್ರೆ ನಡೆಯಲಾಗುವುದು.  ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರದ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ರಾಜ್ಯ ಸರ್ಕಾರ ಸತ್ತು ಹೋಗಿದೆ.  ರಾಜ್ಯದಲ್ಲಿ ಕಾನೂನು ಇದಿಯಾ ? ಎಂದು ಪ್ರಶ್ನಿಸಿದ ಸಲೀಂ ಆಹ್ಮದ್, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.  ಅದೆಲ್ಲವನ್ನೂ ಬಿಟ್ಟು ಮದಸರಾಕ್ಕೆ ಕೈ ಹಾಕಿದ್ದಾರೆ.  ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ ಸರ್ಕಾರ ಕ್ಷಮೆ ಕೇಳಿತು.  ಇದೂ ಹಾಗೆಯೇ ಆಗುತ್ತದೆ ಎಂದರು.

Key words: state government – failed – all -BK Hari Prasad

website developers in mysore