ನಮ್ಮ ನಾಡಿನ ಹೆಮ್ಮೆಯ ಕೆ.ವೈ. ವೆಂಕಟೇಶ್ ಯುವಜನತೆಗೆ ಸ್ಪೂರ್ತಿ- ಸನ್ಮಾನಿಸಿ ಶುಭಕೋರಿದ ಸಚಿವ ನಾರಾಯಣಗೌಡ….

ಬೆಂಗಳೂರು,4,2021(www.justkannada.in):  ಪದ್ಮಶ್ರೀ ಗೌರವಕ್ಕೆ ಭಾಜನರಾಗಿರುವ ಖ್ಯಾತ ಪ್ಯಾರಾ-ಅಥ್ಲೀಟ್ ಕೆ.ವೈ. ವೆಂಕಟೇಶ್ ಅವರ ನಿವಾಸಕ್ಕೆ ತೆರಳಿ, ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ಶುಭಕೋರಿ, ಸನ್ಮಾನಿಸಿದರು.

ದೇಶದ ಹೆಮ್ಮೆಯ ಪುತ್ರ ವೆಂಕಟೇಶ್ ಕನ್ನಡಿಗರು ಎನ್ನುವುದು ಇನ್ನಷ್ಟು ಸಂತಸದ ವಿಚಾರ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿರುವ ಯುವಜನತೆಗೆ ವೆಂಕಟೇಶ್ ಸ್ಪೂರ್ತಿಯಾಗಿದ್ದಾರೆ ಎಂದು ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ, ಪದ್ಮಶ್ರೀ ಗೌರವಕ್ಕೆ ಪಾತ್ರವಾಗಿರುವ ವೆಂಕಟೇಶ್ ಅವರ ಸಾಧನೆಯನ್ನು ಸಚಿವ ನಾರಾಯಣಗೌಡ ಕೊಂಡಾಡಿದರು.jk

ಸಚಿವರು ತಮ್ಮ ನಿವಾಸಕ್ಕೆ ಬಂದು, ತಮ್ಮನ್ನು ಗೌರವಿಸಿದ್ದು ಅವಿಸ್ಮರಣೀಯ. ಸಚಿವರಿಗೂ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ವೆಂಕಟೇಶ್ ಧನ್ಯವಾದ ಅರ್ಪಿಸಿದರು. ತಮ್ಮ ಸಾಧನೆಗೆ ಇಲಾಖೆ ನೀಡಿದ್ದ ನೆರವನ್ನು ಅವರು ಸ್ಮರಿಸಿದರು.

2005 ರಲ್ಲಿ ವೆಂಕಟೇಶ್ ಅವರು 4 ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಆರು ಪದಕಗಳನ್ನು ಪಡೆದು ವಿಶ್ವ ದಾಖಲೆಮಾಡಿ ಭಾರತಕ್ಕೆ ಕೀರ್ತಿತಂದರು. 1994 ರಲ್ಲಿ ಬರ್ಲಿನ್‌ನಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ (ಐಪಿಸಿ) ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು.  ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ಹಾಕಿ, ವಾಲಿಬಾಲ್, ಫುಟ್‌ಬಾಲ್ ಮತ್ತು ಬ್ಯಾಡ್ಮಿಂಟನ್ ಸೇರಿದಂತೆ ಅನೇಕ ಪಂದ್ಯಗಳಲ್ಲಿ ಸಾಧನೆ ತೋರಿ ಪದಕಗಳಿಗೆ ಕೊರಳೊಡ್ಡಿದ್ದಾರೆ.proud-k-y-venkatesh-inspiration-youth-minister-narayana-gowda

ಆಸ್ಟ್ರಿಯಾದಲ್ಲಿ ನಡೆದ ಮಲ್ಟಿ ಡಿಸೆಬಿಲಿಟಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡು ಶಾಟ್ ಪುಟ್‌ ನಲ್ಲಿ  ವೆಂಕಟೇಶ್  ಮೊದಲ ಅಂತರರಾಷ್ಟ್ರೀಯ ಚಿನ್ನದ ಪದಕ ಜಯಿಸಿದ್ದರು.  2002 ರಲ್ಲಿ ನಡೆದ ಎಲ್ಜಿ ವಿಶ್ವಕಪ್ ನಲ್ಲಿ ಬ್ಯಾಡ್ಮಿಂಟನ್ಗಾಗಿ ಅವರು ಬೆಳ್ಳಿ ಪದಕ, 2004 ರಲ್ಲಿ ಓಪನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಶಿಪ್ ನಲ್ಲಿ  ಶಾಟ್ ಪುಟ್, ಡಿಸ್ಕಸ್ ಥ್ರೋ ಮತ್ತು ಜಾವೆಲಿನ್ ಥ್ರೋನಲ್ಲಿ ಮೂರು ಚಿನ್ನ ಮತ್ತು ಎರಡು ಬೆಳ್ಳಿ ಪದಕ ಜಯಿಸಿದರು. ಸ್ವೀಡಿಷ್ ಓಪನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ,  ಹಾಕಿ ಸ್ಪರ್ಧೆಯಲ್ಲಿ ಚಿನ್ನದ ಪದಕ, ಫುಟ್ಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕಗಳು ಮತ್ತು 2006 ರಲ್ಲಿ ಯುರೋಪಿಯನ್ ಓಪನ್ ಚಾಂಪಿಯನ್‌ಶಿಪ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ವೆಂಕಟೇಶ್ ಗೆದ್ದಿದ್ದಾರೆ.

Key words:  proud- K.Y  Venkatesh – inspiration – youth-Minister -Narayana Gowda