‘ಕೈ’ ನಾಯಕರ ಪಿತೂರಿಯಿಂದ ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆ- ಶಾಸಕ ಎಂ.ಪಿ ರೇಣುಕಾಚಾರ್ಯ ಆರೋಪ.

ಬೆಂಗಳೂರು,ಜೂನ್,22,2022(www.justkannada.in):  ಕಾಂಗ್ರೆಸ್ ನಾಯಕರ ಪಿತೂರಿಯಿಂದಾಗಿ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರುದ‍್ಧ ಪ್ರತಿಭಟನೆ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಆರೋಪಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಕೆಲವರು ಆರ್ ಎಸ್‌ಎಸ್ ಸಂಘಟನೆ ಬಗ್ಗೆ ಮಾತನಾಡುತ್ತಾರೆ. ಆರ್. ಎಸ್‌ಎಸ್ ನವರಿಗೆ ನೀವು ಟಾರ್ಗೆಟ್ ಮಾಡಿದರೆ ಜನರು ನಿಮ್ಮ ಭಸ್ಮ ಮಾಡುತ್ತಾರೆ. ಅಗ್ನಿ ಪಥ್ ಗೆ ಆರ್ ಎಸ್‌ಎಸ್ ನವರು ಏಕೆ ಸೇರಬಾರದು? ಅವರೇನು ದೇಶ ವಿರೋಧಿಗಳಾ ? ಎಂದು  ಕಿಡಿಕಾರಿದರು.

Key words: Protest- against –Agnipath- project – Congress leaders-MLA-Renukacharya