ಗ್ಯಾರಂಟಿ ಬಗ್ಗೆ ಡೆಡ್‌ ಲೈನ್ ಕೊಡಲು ಪ್ರತಾಪ್ ಸಿಂಹ ಯಾರು ? ಬೆಂಕಿ ಹಚ್ಚುವುದು ಬಿಟ್ಟರೆ ಮೈಸೂರಿಗೆ ಅವರ ಕೊಡುಗೆ ಏನು..? ಎಂ. ಲಕ್ಷ್ಮಣ್ ಕಿಡಿ.

ಮೈಸೂರು,ಮೇ,29,2023(www.justkannada.in):  ಕಾಂಗ್ರೆಸ್ ಸರ್ಕಾರ ಜೂನ್ 1ರಲ್ಲಿ  ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರದಿದ್ದರೇ ಹೋರಾಟ ಮಾಡಲಾಗುತ್ತದೆ ಎಂದಿದ್ದ ಸಂಸದ ಪ್ರತಾಪ್ ಸಿಂಹಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ನಿಮಗೆ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಗ್ಯಾರಂಟಿ ಬಗ್ಗೆ ಡೆಡ್‌ ಲೈನ್ ಕೊಡಲು ಪ್ರತಾಪ್ ಸಿಂಹ ಯಾರು ? ಬೆಂಕಿ ಹಚ್ಚುವುದು ಬಿಟ್ಟರೆ ಮೈಸೂರಿಗೆ ಅವರ ಕೊಡುಗೆ ಏನು..? ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಡಿ ಕೆ ಶಿವಕುಮಾರ್ ಸುಮ್ಮನೆ ಮಾತನಾಡಲ್ಲ. 5 ಗ್ಯಾರಂಟಿ ಯೋಜನೆ ರಾಜ್ಯದಲ್ಲಿ ಜಾರಿಗೆ ಬರಲಿದೆ. ಇದಕ್ಕೆ ಡೆಡ್‌ಲೈನ್ ಕೊಡಲು ಪ್ರತಾಪಸಿಂಹ ಯಾರು ? 15 ಲಕ್ಷ ಪ್ರತಿ ಖಾತೆಗೆ ಹಾಕುತ್ತೇವೆ ಅಂದರು. ಯುವಕರಿಗೆ ಉದ್ಯೋಗ ಸೃಷ್ಟಿ ಏನಾಯಿತು ? ಪ್ರತಿಯೊಬ್ಬರಿಗೆ ಕುಡಿಯುವ ನೀರಿನ ಯೋಜನೆ ಏನಾಯ್ತು ? ಎಂದು ಎಂ.ಲಕ್ಷ್ಮಣ್ ಪ್ರಶ್ನಿಸಿದರು.

ಕೇವಲ 15 ದಿನದಲ್ಲಿ ನಮ್ಮ ಸರ್ಕಾರ ಟೇಕ್ ಆಫ್ ಆಗಿದೆ. 34 ಮಂತ್ರಿಗಳ ಸಂಪೂರ್ಣ ಸರ್ಕಾರ ರಚನೆಯಾಗಿದೆ. ಗ್ಯಾರಂಟಿ ಯೋಜನೆ ವಿಚಾರದಲ್ಲಿ ನಮಗೆ ಯಾವುದೇ ಅನುಮಾನಗಳಿಲ್ಲ. ಕೆಲ ಬಿಜೆಪಿ ಮುಖಂಡರು ತಮ್ಮ ಅಸ್ತಿತ್ವಕ್ಕೆ ಮತ್ತು ನೀರಿಲ್ಲದೆ ಬೋಟು ಓಡಿಸುವವರಿಗೆ ಅನುಮಾನವಿದೆ. ನಮ್ಮ ವಿರುದ್ದ ಟ್ರೆಂಡ್ ಕ್ರಿಯೇಟ್ ಮಾಡಲು ಹೊರಟಿದ್ದಾರೆ. ನೈತಿಕತೆ ಮಾನ ಮರ್ಯಾದೆ ಇದ್ದರೆ ಬಿಜೆಪಿಯವರು  2018ರ ಎಷ್ಟು ಭರವಸೆ ಈಡೇರಿಸಿದ್ದಾರೆ. ಸಂಸದ ಪ್ರತಾಪಸಿಂಹ ಚುನಾವಣೆ ವೇಳೆ ಎಲ್ಲಿ ಹೋಗಿದ್ದರು ? ವರುಣದಲ್ಲಿ ತೊಡೆ ತಟ್ಟಿಕೊಂಡು ಬೆಂಕಿ ಹಚ್ಚಲು ಹೋಗಿದ್ದರು. ನಿಮ್ಮ 8 ಕ್ಷೇತ್ರದ ಕಥೆ ಏನು ಆಯ್ತು ? ಕ್ಷೇತ್ರಗಳಿಗೆ ಹೋದರೆ ಪ್ರತಾಪಸಿಂಹಗೆ ಕಲ್ಲು ಹೊಡೆಯುತ್ತಾರೆ. ಓಡಿಸಿಕೊಂಡು ಬಂದು ಕಲ್ಲು ಹೊಡೆಯುತ್ತಾರೆ ಎಂದು ಗುಡುಗಿದರು.

ಪ್ರತಾಪ್ ಸಿಂಹ 2014ರಲ್ಲಿ ನೀಡಿದ ಭರವಸೆಗಳು ಏನಾದವು? ಜೂನ್ 1ಕ್ಕೆ ನಿಮ್ಮ ಕಚೇರಿಗೆ ಬರುತ್ತೇನೆ. ಈ ಭರವಸೆಗಳಿಗೆ ಉತ್ತರ ಕೊಡಲೇಬೇಕು ಎಂದು ಸವಾಲು ಹಾಕಿದ ಎಂ.ಲಕ್ಷ್ಮಣ್,  ವಿ ಸೋಮಣ್ಣ ಅವರನ್ನು ಬಲಿಕಾ ಬಕ್ರಾ ಮಾಡಿದಿರಿ. ಆ ಸಮುದಾಯ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು. ವರುಣದಲ್ಲಿ ಯಾವ ರೀತಿ ಮಾತನಾಡಿದಿರಿ ? ಯಾವ ರೀತಿ ಬೆಂಕಿ ಹಚ್ಚಲು ಪ್ರಯತ್ನಪಟ್ಟಿರಿ. ಜಾತಿ ಜಾತಿಗಳನ್ನು ಬೇರೆ ಮಾಡುವ ಕೆಲಸ ಮಾಡಿದಿರಿ. ಸಿದ್ದರಾಮನ ಹುಂಡಿಯಲ್ಲಿ ನೀವೇ ಗಲಾಟೆ ಸೃಷ್ಟಿ ಮಾಡಿದಿರಿ. ಜಾತಿ ಜಾತಿ ಮಧ್ಯೆ ವಿಷ ಬೀಜ ಬಿತ್ತಿದಿರಿ. ಮಧ್ಯರಾತ್ರಿ 1 ಗಂಟೆಯವರೆಗೂ ಒಂದು ರೀತಿ ಕಾಫಿ, ಟಿ. ಮಧ್ಯರಾತ್ರಿ 1 ಗಂಟೆ ‌ನಂತರ ಬೇರೆ ರೀತಿ ಕಾಫಿ ಟೀ ಕುಡಿದು ಪ್ರಯತ್ನ ಮಾಡಿದ್ದೀರಿ.  2024ರ ಚುನಾವಣೆಯಲ್ಲಿ  ನಿಮ್ಮನ್ನ  2ವರೆ ಲಕ್ಷ  ಮತಗಳ ಅಂತರದಲ್ಲಿ ಸೋಲಿಸುತ್ತಾರೆ ಎಂದು ಭವಿಷ್ಯ ನುಡಿದರು.

ನಳೀನ್ ಕುಮಾರ್ ಕಟೀಲು ದೊಡ್ಡ ಕಮಿಡಿಯನ್ . ನರೇಂದ್ರ ಮೋದಿ ವಿಶ್ವಗುರು ಕರೆದುಕೊಂಡು ಬಂದಿರಿ. ಮೋದಿ ಕೈ ತೋರಿಸಿ ನಮ್ಮ ಪರ ಪ್ರಚಾರ ಮಾಡಿದರು. ಮೋದಿ ಟೆಲಿ ಪ್ರಿಂಟರ್ ಇದ್ದರೆ ಮಾತ್ರ ಮಾತನಾಡುವುದು ಎಂದು ಲೇವಡಿ ಮಾಡಿದರು.

ಜೆಡಿಎಸ್ ವಿಸರ್ಜನೆ ಏಕೆ ಮಾಡಿಲ್ಲ ?

ಜೆಡಿಎಸ್ ಜೋಕರ್ ಪಕ್ಷ.  ಅದನ್ನು ಮುಗಿಸಲು ಬಿಜೆಪಿ ಕಾರಣ. ಅದಕ್ಕೆ ಬಿಜೆಪಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜೆಡಿಎಸ್ ವಿಸರ್ಜನೆ ಏಕೆ ಮಾಡಿಲ್ಲ ? ಮೈ ಕೈ ಪರಚಿಕೊಳ್ಳುವುದನ್ನು ಬಿಟ್ಟು ವಿಸರ್ಜನೆ‌ ಮಾಡಿ. 19 ಶಾಸಕರನ್ನು ಉಳಿಸಿಕೊಳ್ಳುವುದನ್ನು ಮಾಡಿ. 10 ರಿಂದ 12 ಜನ ಜೆಡಿಎಸ್‌ ನಿಂದ‌ ಹೊರ ಹೋಗಲು ಮುಂದಾಗಿದ್ದಾರೆ. ಜೆಡಿಎಸ್ ಕಥೆ ಮುಗಿದಿದೆ ಜೆಡಿಎಸ್ ಮುಗಿದ ಅಧ್ಯಾಯ. ಜೆಡಿಎಸ್‌ ಅನ್ನು ಮುಂದೆ ಯಾರು ನಂಬುವುದಿಲ್ಲ ಎಂದು ಎಂ.ಲಕ್ಷ್ಮಣ್ ಹೇಳಿದರು.

ಅಡ್ಡಂಡ ಕಾರ್ಯಪ್ಪ ವಿರುದ್ದ ವಾಗ್ದಾಳಿ ನಡೆಸಿದ ಎಂ.ಲಕ್ಷ್ಮಣ್, ಮೈಸೂರಿನಲ್ಲಿ ನಿಮ್ಮದು ಏನು‌ ನಡೆಯಲ್ಲ. ಏನಾದರೂ ಮಾಡಿದರೆ ರೌಡಿ ಶೀಟರ್ ತೆರೆಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹಿಂದೆ ಆತನ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆ ದೂರು ಏನಾಗಿದೆ ? ಕೂಡಲೇ ಎಫ್ ಐ ಆರ್ ದಾಖಲಿಸಿ  ಎಂದು ಆಗ್ರಹಿಸಿರು.

ಅಶ್ವಥ್ ನಾರಾಯಣ್ ವಿರುದ್ದ ಎಫ್‌ ಐಆರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್  ಕೂಡಲೇ ಅಶ್ವಥ್ ನಾರಾಯಣ್ ಅವರನ್ನು ಬಂಧಿಸಬೇಕು. 24 ಗಂಟೆಯಲ್ಲಿ ಅಶ್ವಥ್ ನಾರಾಯಣ್ ಬಂಧಿಸದಿದ್ದರೆ ಐಜಿ ಕಚೇರಿ ಮುಂದೆ ಪ್ರತಿಭಟನೆ. ಪೊಲೀಸರ ಆಟ ಮುಂದೆ ನಡೆಯಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದಂತೆ ಮಾಡಬೇಡಿ. ಯಾರ ಪರವಾಗಿ ಯಾರ ಒತ್ತಾಯಕ್ಕೆ ಕೆಲಸ ಮಾಡುವುದನ್ನು ಬಿಡಿ. ಒತ್ತಡಕ್ಕೆ ಒಳಗಾಗಿ ಕೆಲಸ ಮಾಡಬೇಡಿ ಎಂದರು.

ದ್ವೇಷದ ರಾಜಕಾರಣ ಮಾಡುತ್ತಿರುವುದು ಬಿಜೆಪಿ. ರಾಜ್ಯದಾದ್ಯಂತ ಬಿಜೆಪಿಯಿಂದ ಸಿದ್ದರಾಮಯ್ಯ ವಿರುದ್ದ 42 ಪ್ರಕರಣ ದಾಖಲಾಗಿದೆ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರ ಮೇಲೆ ಪ್ರಕರಣ ದಾಖಲಿಸಿದ್ದೀರಾ ಎಂದು ಆರೋಪಿಸಿದರು.

Key words: Pratap Simha -dead line – guarantee-KPCC-M. Laxman –mysore