ರೈತ ಮುಖಂಡರ‌ ನಡುವಿನ ಒಡಕು ಕುರಿತು ರೈತ ಮುಖಂಡ ಬಡಗಲಪುರ ನಾಗೇಂದ್ರ ಹೇಳಿದ್ದೇನು?

ಬೆಂಗಳೂರು,ಏಪ್ರಿಲ್,01,2021(www.justkannada.in) :  ಒಂದು ತಟ್ಟೆಯಲ್ಲಿ ಊಟ ಮಾಡುವ ಪರಿಸ್ಥಿತಿ ಸದ್ಯಕ್ಕಿಲ್ಲ. ಆದರೆ, ಸಹಪಂಕ್ತಿಯಲ್ಲಿ ಭೋಜನ ಮಾಡ್ತಿವಿ ಎಂದು ರೈತ ಮುಖಂಡರ‌ ನಡುವಿನ ಒಡಕಿನ ಬಗ್ಗೆ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾರ್ಮಿಕವಾಗಿ ಹೇಳಿದರು.

Illegally,Sand,carrying,Truck,Seized,arrest,driverಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಳಿತುಕೊಂಡು ಸಮಾಲೋಚಿತವಾಗಿ ಯೋಚಿಸಿ ಹೋರಾಟ ಮಾಡುತ್ತೀವಿ. ನಾವೀಗಾಗಲೇ ಕೋಡಿಹಳ್ಳಿ ಚಂದ್ರಶೇಖರ್ ಜೊತೆ ಮಾತುಕತೆ ನಡೆಸಿದ್ದೇವೆ. ಕೋಡಿಹಳ್ಳಿ ಚಂದ್ರಶೇಖರ್ ಸಹ ಸಂಯುಕ್ತ ಕರ್ನಾಟಕ ರೈತಸಂಘದ ಸದಸ್ಯರು. ಅವರು ಸಹ ನಮಗೆ ಹಲವು ಸಲಹೆಗಳನ್ನು ನೀಡಿದ್ದಾರೆ ಎಂದರು.

ರೈತಸಂಘದಲ್ಲಿ ಶಿಸ್ತಿರುವಂತೆ ಸೂಚಿಸಿದ್ದಾರೆ. ಅದರಂತೆ ಮುಂದೆ ನಮ್ಮ ಸಂಘಟನೆ ಶಕ್ತಿಯುತವಾಗಲಿದೆ. ನಾವು ತೆಗೆದುಕೊಂಡ ತೀರ್ಮಾನಗಳಿಗೆ ಬದ್ಧರಾಗಿರುತ್ತೇವೆ. ಅದರಂತೆ ಎಲ್ಲಾ ಸದಸ್ಯರು ಕೂಡಾ ಒಮ್ಮತದ ತೀರ್ಮಾನ ತೆಗೆದುಕೊಳ್ಳಬೇಕು. ಸಂಯುಕ್ತ ಕರ್ನಾಟಕ ರೈತಸಂಘ ವಿಸ್ತರಿಸಲು ಹಲವರನ್ನು ಸೇರಿಸಿಕೊಳ್ಳಲು ನಿರ್ಧರಿಸಿದ್ದೇವೆ. ದೆಹಲಿ ಮುಖಂಡರ ಜೊತೆಯೂ ಚರ್ಚೆಯಾಗಿದೆ ಎಂದು ಮಾಹಿತಿ ನೀಡಿದರು.

Peasant,leaders,Between,Split,peasant,leader,Badagalpur Nagendra

ನಾವು ರಾಜಕೀಯ ಪ್ರೇರಿತ ಸಂಘಟನೆಗಳ ಹೋರಾಟವನ್ನು ಖಂಡಿಸುತ್ತೇವೆ. ಎಲ್ಲಾ ರೈತ ಸಂಘಟನೆಗಳು ರಾಜಕೀಯ ಪ್ರೇರಿತಕ್ಕೆ ಒಳಗಾಗಬಾರದು. ಇದು ನಮ್ಮ ಮೂಲ ಉದ್ದೇಶ. ಆ ನಿಟ್ಟಿನಲ್ಲಿ ರೈತಸಂಘ ಮುಂದೆ ದಿಟ್ಟ ಹೆಜ್ಜೆ ಇಡಲಿದೆ ಎಂದು ಹೇಳಿದರು.

key words : Peasant-leaders-Between-Split-peasant-leader-Badagalpur Nagendra