ಸಚಿವ ಮುನಿರತ್ನಗೆ ರಾಖಿ ಕಟ್ಟಿ ಶುಭ ಕೋರಿದ ಮಹಿಳಾ ಕಾರ್ಯಕರ್ತೆಯರು

ಬೆಂಗಳೂರು, ಆಗಸ್ಟ್ 22, 2021 (www.justkannada.in):ತೋಟಗಾರಿಕೆ ಹಾಗೂ ಯೋಜನಾ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಮುನಿರತ್ನ‌ ಅವರಿಗೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮಹಿಳಾ ಕಾರ್ಯಕರ್ತರು ರಕ್ಷಾ ಬಂಧನ ಅಂಗವಾಗಿ ರಾಖಿ ಕಟ್ಟಿ ಸಿಹಿ‌ ತಿನಿಸಿ ಸಂಭ್ರಮಿಸಿ,‌ ನೂತನ‌ ಶುಭಕೋರಿದರು.

ಮಲ್ಲೇಶ್ವರಂನ ಗೃಹ ಕಚೇರಿಯಲ್ಲಿ ರಕ್ಷಾ ಬಂಧನ ಆಚರಿಸಿ ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮುನಿರತ್ನ, ಕ್ಷೇತ್ರದ ಕಾರ್ಯಕರ್ತೆಯರು ತಮಗೆ ರಾಖಿ ಕಟ್ಟಿ ಶುಭಕೋರಿರುವುದು ಸಂತಸ ತಂದಿದೆ. ರಕ್ಷಾಬಂಧನವೆನ್ನುವುದು ಒಡಹುಟ್ಟಿದವರ ಬಾಂಧವ್ಯ ಅಷ್ಟೇ ಅಲ್ಲದೇ ಬಾತೃತ್ವಭಾವ ಹೊಂದಿರುವ ಪ್ರತಿಯೊಬ್ಬರ ಮನಸಿನ ಭಾವವೂ ಆಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿರುವ ಸಂದರ್ಭದಲ್ಲಿ ಈ ರಕ್ಷಾಬಂಧನವೂ ಬಂದಿದೆ.ಕ್ಷೇತ್ರದ ಕಾರ್ಯಕರ್ತರ ಸ್ನೇಹ ಆಶೀರ್ವಾದ ಹೀಗೆ ಸದಾ ಇರಲಿ ಎಂದರು.

ತೋಟಗಾರಿಕಾ ಇಲಾಖೆ ಹಾಗೂ ಯೋಜನೆ ಸಾಂಖ್ಯಿಕ ಇಲಾಖೆಯಲ್ಲಿ ಅಭಿವೃದ್ಧಿ ಹಾಗೂ ಜನಪರ ಕೆಲಸಗಳನ್ನು ಮಾಡುವ ಉದ್ದೇಶ ಹೊಂದಿದ್ದೇನೆ ಎಂದು ಮುನಿರತ್ನ ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಮುನಿರತ್ನ ಕುಟುಂಬಸ್ಥರು ಸಹ ಪಾಲ್ಗೊಂಡಿದ್ದರು.