ರಾಜ್ಯದಲ್ಲಿ ನಾಳೆಯಿಂದಲೇ ಕಂಪ್ಲೀಟ್ ಲಾಕ್ ಡೌನ್ ಮಾಡುವಂತೆ ಫನಾ ಅಧ್ಯಕ್ಷರ ಮನವಿ…

kannada t-shirts

ಬೆಂಗಳೂರು,ಮೇ,6,2021(www.justkannada.in): ರಾಜ್ಯದಲ್ಲಿ ಕೊರೋನಾ ವಿಚಾರದಲ್ಲಿ ಪರಿಸ್ಥಿತಿ  ಕೈಮೀರಿ ಹೋಗಿದೆ. ಹೀಗಾಗಿ ನಾಳೆಯಿಂದಲೇ ಕಂಪ್ಲೀಟ್ ಲಾಕ್ ಡೌನ್ ಮಾಡಿ ಎಂದು ಫನಾ ಅಧ್ಯಕ್ಷರು ಮನವಿ ಮಾಡಿದ್ದಾರೆ.jk

ಈ ಕುರಿತು ಮಾತನಾಡಿರುವ ಫನಾ ಅಧ್ಯಕ್ಷರು,  ಕೊರೋನಾ ಹೊಡೆತಕ್ಕೆ ಕರುನಾಡ ಪರಿಸ್ಥಿತಿ ಕೈಮೀರಿ ಹೋಗಿದೆ. ಲಾಕ್ ಡೌನ್ ಗೆ ಮೇ 12 ರವರೆಗೆ ಯಾಕೆ ಕಾಯಬೇಕು. ನಾಳೆಯಿಂದಲೇ ಲಾಕ್ ಡೌನ್  ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು.pana-president-urges-complete-lockdown-state

ಮಿನಿ ಲಾಕ್ ಡೌನ್ ಜಾರಿಯಾದ್ರೂ ಕೇಸ್ ಗಳು ಕಡಿಮೆಯಾಗಿಲ್ಲ. ಕೊರೋನಾ 2ನೇ ಅಲೆ ಅಬ್ಬರ ನಿಂತಿಲ್ಲ.  ಇದು ಕೋವಿಡ್ 2ನೇ ಅಲೆಯ ಆರಂಭ ಅಷ್ಟೆ. ಮೇ 15ರ ನಂತರ  ಕೊರೊನಾ ಮತ್ತಷ್ಟು ದುಪ್ಪಟ್ಟಾಗುತ್ತದೆ. ಈಗಲೇ ಎಚ್ಚೆತ್ತುಕೊಳ್ಳದಿದ್ರೆ ರಾಜ್ಯಕ್ಕೆ ಆಪತ್ತು ಎದುರಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

Key words: pana -president –urges- complete lockdown -state

website developers in mysore