ವ್ಯಾಕ್ಸಿನೇಷನ್ ಆಗಿದ್ರಷ್ಟೆ ಮಾಲ್, ಥಿಯೇಟರ್ ಗೆ ಎಂಟ್ರಿ: ರಾಜ್ಯ ಸರ್ಕಾರದ ನೂತನ ಕೋವಿಡ್ ಮಾರ್ಗಸೂಚಿ ಹೀಗಿದೆ ನೋಡಿ.

ಬೆಂಗಳೂರು,ಡಿಸೆಂಬರ್,3,2021(www.justkannada.in):  ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾದ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ಇಂದು ಅಧಿಕಾರಿಗಳು, ತಜ್ಞರು ಮತ್ತು ಸಚಿವರ ಜತೆ ಸಭೆ ನಡೆಸಿ ಚರ್ಚಿಸಿದ್ದು ಹಲವು ನಿರ್ಧಾರಗಳನ್ನ ಕೈಗೊಂಡಿದ್ದಾರೆ.

ಒಮಿಕ್ರಾನ್ ವೈರಸ್ ಪತ್ತೆ ಹಿನ್ನೆಲೆ ಇದೀಗ ರಾಜ್ಯದಲ್ಲಿ ನೂತನ ಕೊರೋನಾ ಮಾರ್ಗಸೂಚಿ ಜಾರಿ ಮಾಡಲಾಗುತ್ತಿದ್ದು, ಇನ್ಮುಂದೆ ವ್ಯಾಕ್ಸಿನೇಷನ್ ಆಗಿದ್ರಷ್ಟೆ ಮಾಲ್, ಥಿಯೇಟರ್ ಗೆ ಎಂಟ್ರಿ ಅವಕಾಶ ಹಾಗೂ ಶಾಲಾ ಕಾಲೇಜುಗಳನ್ನ ಸಮಾರಂಭ ಮಾಡುವಂತಿಲ್ಲ. ಸಿನಿಮಾ ಹಾಲ್ ಮಾಲ್ ಶಾಲೆಗಳಲ್ಲಿ ಕೆಲಸಮಾಡುವವರು ಮಕ್ಕಳ ಪೋಷಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು ಎಂಬ ನಿರ್ಣಯವನ್ನ ಸಿಎಂ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಸಭೆ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಒಮಿಕ್ರಾನ್ ಅಷ್ಟೊಂದು ತೀವ್ರ ಪ್ರಮಾಣದಲ್ಲಿ ಇಲ್ಲ. ರಾಜ್ಯದಲ್ಲಿ ಯಾರೂ ಕೂಡ ಸೋಂಕಿನಿಂದ ಮೃತಪಟ್ಟಿಲ್ಲ. ಸೋಂಕಿತರಿಗೆ ತೀವ್ರತರ ಲಕ್ಷಣಗಳು ಇಲ್ಲ. ಸಾಮಾನ್ಯ ಲಕ್ಷಣಗಳಿವೆ. ಹೀಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಸಿಎಂ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಆರೋಗ್ಯ ತಜ್ಞರು ಸಚಿವರ ಜತೆ ಸಭೆ ನಡೆಸಯುತ್ತಿದೆ.  ಜಗತ್ತುನಾದ್ಯಂತ 400 ಪ್ರಕರಣಗಳು ಪತ್ತೆಯಾಗಿದೆ. ವಿಮಾನ ನಿಲ್ದಾಣದಲ್ಲಿ ಟೆಸ್ಟಿಂಗ್ ಕಡ್ಡಾಯಗೊಳಿಸಲಾಗಿದೆ. ವಿದೇಶದಿಂದ ಬಂದವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ವ್ಯಾಕ್ಸಿನೇಷನ್ ಆಗಿದ್ರಷ್ಟೆ ಮಾಲ್ ಥಿಯೇಟರ್ ಪ್ರವೇಶಿಸಲು ಅವಕಾಶ, ಶಾಲಾ ಕಾಲೇಜು ವಿದ್ಯಾರ್ಥಿಗಳ ಪೋಷಕರಿಗೆ ವ್ಯಾಕ್ಸಿನೇಷನ್ ಕಡ್ಡಾಯ.

ಸಿನಿಮಾ ಹಾ;ಲ್ ಮಾಲ್ ಶಾಲೆಗಳಲ್ಲಿ ಕೆಲಸಮಾಡುವವರು ಮಕ್ಕಳ ಪೋಷಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು. ಶಾಲಾಕಾಲೇಜುಗಳಲ್ಲಿ ಸಮಾರಂಭಕ್ಕೆ ಅವಕಾಶವಿಲ್ಲ.  ಮದುವೆಗಳಲ್ಲಿ 500 ಜನ ಮಾತ್ರ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಹಾಗೆಯೇ  ಪ್ರತಿನಿತ್ಯ 1 ಲಕ್ಷ ಕೋವಿಡ್ ಟೆಸ್ಟ್ ಮಾಡಲು ಹಾಗೂ ಆಸ್ಪತ್ರೆಗಳಲ್ಲಿ   ಬೆಡ್ ಗಳನ್ನ ಮತ್ತೆ ಸಿದ್ಧಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ರಾಜ್ಯದಲ್ಲಿ ಮತ್ತೆ ಕಂಟ್ರೋಲ್ ರೂಂ ಆರಂಭಿಸಲು ಸೂಚನೆ ನೀಡಲಾಗಿದೆ. ಔಷಧ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲು ತಿಳಿಸಿದ್ದೇವೆ. ಹೊಸ ವರ್ಷ ಕ್ರಿಸ್ ಮಸ್ ಗೆ ಶೀಘ್ರದಲ್ಲೇ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುತ್ತದೆ ಎಂದು ಆರ್.ಅಶೋಕ್ ಮಾಹಿತಿ ನೀಡಿದರು.  ಇನ್ನು ಈ ಬಾರಿ ಬೆಳಗಾವಿಯಲ್ಲೇ ಅಧಿವೇಶನ ನಡೆಯಲಿದೆ ಎಂದರು.

Key words: omicron- See -state government-new –covid- guidelines.