ನನ್ನ ಮತ್ತು  ಸಿದ್ಧರಾಮಯ್ಯ ನಡುವೆ ಯಾವುದೇ ಅಸಮಾಧಾನ ಇಲ್ಲ- ಮೈಸೂರಿನಲ್ಲಿ ಡಿ.ಕೆ ಶಿವಕುಮಾರ್ ಸ್ಪಷ್ಟನೆ…….

ಮೈಸೂರು,ನ,8,2019(www.justkannada.in):  ನನ್ನ ಮತ್ತು ಮಾಜಿ ಸಿಎಂ ಸಿದ್ಧರಾಮಯ್ಯ ನಡುವೆ ಯಾವುದೇ ಅಸಮಾಧಾನ ಇಲ್ಲ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ನಮ್ಮ ನಾಡದೇವತೆ ಚಾಮುಂಡೇಶ್ವರಿ. ದುಃಖವನ್ನು ದೂರ ಮಾಡುವ ದೇವಿ ದುರ್ಗಾದೇವಿ. ಆ ದುರ್ಗಾದೇವಿಯ ಸ್ವರೂಪ ಚಾಮುಂಡೇಶ್ವರಿ. ರಾಜ್ಯಕ್ಕೆ, ನನಗೆ ನಮ್ಮ ಬಂಧುಗಳಿಗೆ, ಪಕ್ಷ ರಾಜ್ಯದ ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದೆ. ದೇವರು ಎಲ್ಲರಿಗೂ ಸೇರಿದ್ದು ಯಾರ ಆಸ್ತಿನೂ ಅಲ್ಲ. ನನಗೆ ಮೊದಲಿಂದಲೂ ಸಹ ಇಷ್ಟವಾದ ದೇವರು ಚಾಮುಂಡೇಶ್ವರಿ. ನಮ ಹಳೆ ಮೈಸೂರು, ಈಗ ಹೊಸ ಮೈಸೂರು ಆದಾಗಲೂ ಸಹ ಶ್ರೇಷ್ಠವಾದ ಸ್ಥಳವಾಗಿದೆ. ರಾಜರಬಕಾಲದಿಂದಲೂ ಶ್ರೇಷ್ಠವಾದ ಸ್ಥಳ ಅಂತ ಗುರ್ತಿಸಿ ಪೂಜೆ ಮಾಡ್ತಿದ್ದಾರೆ ಎಂದರು.

ನಾನು ಕಷ್ಟದಲ್ಲಿದ್ದಾಗ ಸಾವಿರಾರು ಜನರು ಹರಕೆ ಮಾಡಿಕೊಂಡಿದ್ದರು. ಕೋರ್ಟ್ ಬಳಿ ಬಂದಾಗ ವಿಚಾರ ಹೇಳಿದ್ದರು. ಇವತ್ತು ಪವಿತ್ರವಾದ ಶುಕ್ರವಾರ ದೇವಿಗೆ ಪೂಜೆ ಸಲ್ಲಿಸಿದ್ದೇವೆ.ನನ್ನ ಕಷ್ಟ ಪರಿಹಾರವಾಗಲಿ ಅಂತ ಬೇಡಿದ್ದೇನೆ. ನನ್ನ ಮುಂದಿನ ನಡೆ ಅಂತ ಏನೂ ಇಲ್ಲ ಎಲ್ಲವೂ ನಿಮಗೆ ಗೊತ್ತಾಗುತ್ತದೆ. ನಾನು ವಿಧಾನ ಸೌಧದಲ್ಲಿ ಸಹ ಹೇಳಿದ್ದೆ ನ್ಯಾಯದ ತಕ್ಕಡಿ ಒಂದಿರುತ್ತದೆ. ಬಸವಣ್ಣನವರು ಹೇಳಿದ ಹಾಗೆ ನುಡಿದಂತೆ ನಡೆಯುವ ಎಂಬ ಹೇಳಿಕೆಯಂತೆ ನಡೆದಿದ್ದಾರಾ..? ಎಂದು ಸಿಎಂ ಬಿಎಸ್ವೈಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ಪ್ರಶ್ನಿಸಿದರು.

ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇದೆಯೆಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಪಾಪ ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ನಮ್ಮ ನಾಯಕರು. ಮೊದಲು ಶಾಸಕಾಂಗ ಪಕ್ಷದ ನಾಯಕರಾಗಿದ್ದರು. ಸದ್ಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ನಾನು ಶಾಸಕ ಅವರ ಕೈ ಕೆಳಗ ನಾವು ಸದಸ್ಯರಾಗಿ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ನನಗೆ ಸ್ಥಾನ ಮಾನ ನೀಡುವ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಮಾಡ್ತಾರೆ. ಈ ಹಿಂದೆಯೂ ಹಲವಾರು ಅಧಿಕಾರ ಕೊಟ್ಟಿದ್ದು ನಮ ಹೈಕಮಾಂಡ್ ಎಂದರು.

ಪಕ್ಷ ಯಾವುದೇ ಜವಾಬ್ದಾರಿ ಕೊಟ್ರು ನಿಭಾಯಿಸಲು ಸಿದ್ದನಿದ್ದೇನೆ

ಉಪಚುನಾವಣೆ ಹಿನ್ನೆಲೆ ಪಕ್ಷ ಯಾವುದೇ ಜವಾಬ್ದಾರಿ ಕೊಟ್ರು ನಿಭಾಯಿಸಲು ಸಿದ್ದನಿದ್ದೇನೆ. ೧೯೭೫ರಿಂದ ಸಹ ಕಾಂಗ್ರೆಸ್ ಬಾವುಟವನ್ನು ಹೊತ್ಕೊಂಡಿದ್ದೇನೆ. ರಾಜೀವ್ ಗಾಂಧಿ, ಬಂಗಾರಪ್ಪ ಕಾಲದಿಂದಲೂ ಸಹ ನಿಷ್ಠೆಯಿಂದ ನಡೆದಿದ್ದೇನೆ. ಈಗಲೂ‌ ಸಹ ಪಕ್ಷ ಹೈಕಮಾಂಡ್ ಕೊಡುವ ಕೆಲಸ ಮಾಡುತ್ತೇನೆ. ನನ್ನ ರಾಷ್ಟ್ರೀಯ ನಾಯಕರು ಯಾವ ಜವಾಬ್ದಾರಿ ಕೊಡ್ತಾರೋ ಅದನ್ನು ನಾನು ನಿಭಾಯಿಸುತ್ತೇನೆ ಎಂದು ಡಿ.ಕೆಶಿ ತಿಳಿಸಿದರು.

ಡಿಕೆಶಿ ಗಡ್ಡ ಶೇವ್ ಮಾಡದೆ ಇರೋದು ಟ್ರೇಂಡಾ ಹೇಗೆ ಅನ್ನೋ ವಿಚಾರ. ಆ ಬಗ್ಗೆ ನನಗೆ ಗೊತ್ತಿಲ್ಲ ನೋಡೋಣ ಆದ್ರ ಬಗ್ಗೆನೂ ಹೇಳ್ತಿನಿ ಎಂದು ನಗುತ್ತಲೇ ಮಾರ್ಮಿಕವಾಗಿ ಡಿಕೆಶಿ ಉತ್ತರಿಸಿದರು.

Key words: no resentment –between –me– Siddaramaiah – DK Sivakumar –Mysore