ಕೃಷಿ ಚಟುವಟಿಕೆಗೆ ಅಡ್ಡಿ ಇಲ್ಲ: ರೈತರಿಗಾಗಿ ಗ್ರೀನ್ ಪಾಸ್- ಸಚಿವ ಬಿ.ಸಿ ಪಾಟೀಲ್ ಹೇಳಿಕೆ…

ಬೆಂಗಳೂರು,ಏಪ್ರಿಲ್,26,2021(www.justkannada.in):  ಕೊರೋನಾ 2ನೇ ಅಲೆಯ ಅಬ್ಬರ ಜೋರಾದ ಹಿನ್ನೆಲೆ ರಾಜ್ಯದಲ್ಲಿ ನಾಳೆಯಿಂದ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿ ಮಾಡಲಾಗಿದ್ದು  ಸಾರಿಗೆ ಸಂಚಾರ ಸೇರಿ ಎಲ್ಲವೂ ಬಂದ್ ಆಗಲಿದೆ. ಈ ಮಧ್ಯೆ ಈ ವೇಳೆ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡ್ಡಿ ಇಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.jk

ಈ ಕುರಿತು ಇಂದು ಮಾತನಾಡಿದ ಕೃಷಿ ಸಚಿವ ಬಿಸಿ ಪಾಟೀಲ್, ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡ್ಡಿ ಇರುವುದಿಲ್ಲ. ಕೃಷಿ ಉತ್ಪನ್ನ ಸಾಗಿಸುವುದಕ್ಕೆ ಯಾವುದೇ ತೊಂದರೆ ಇಲ್ಲ. ಪೊಲೀಸರು ತಡೆದರೇ ಅದಕ್ಕಾಗಿ ರೈತರಿಗೆ ಗ್ರೀನ್ ಪಾಸ್ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.no-disruption-agricultura-l-activity-lockdown-minister-bc-patil

ಲಾಕ್ ಡೌನ್ ಕುರಿತು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮಾತನಾಡಿ,  ಕಟ್ಟಡ ಕಾಮಗಾರಿಯೆ ಯಾವುದೇ ತೊಂದರೆ ಇರುವುದಿಲ್ಲ. ಇದು ಲಾಕ್ ಡೌನ್ ಅಲ್ಲ. ಟಫ್ ರೂಲ್ಸ್. ಕೊರೊನಾ ತಡೆಗೆ  ಬಿಗಿಕ್ರಮ ಅನುಸರಿಸಬೇಕು ಎಂದರು.

Key words: no disruption – agricultura-l activity-lockdown-Minister -BC Patil.