ಸ್ವಾಭಿಮಾನಿ ಕಡು ಬಡ ಕುಟುಂಬಗಳು ಸರ್ಕಾರದ ಸಹಾಯಧನ ಪಡೆದುಕೊಳ್ಳಲು ಮುಂದಾಗಿ : ಆರ್ ರಘು ಕೌಟಿಲ್ಯ

ಮೈಸೂರು, ಜೂ.13, 2021 : (www.justkannada.in news ) ಲಾಕ್ ಡೌನ್ ನಿಂದಾಗಿ ಆರ್ಥಿಕವಾಗಿ ತೊಂದರೆಯಲ್ಲಿರುವ ಕ್ಷೌರಿಕರು, ಮಡಿವಾಳ, ಟೈಲರಿಂಗ್, ದರ್ಜಿಗಳು ಮತ್ತು ಆಟೋ ಚಾಲಕರ 50 ಬಡ ಕುಟುಂಬಗಳ ಅರ್ಹ ಫಲಾನುಭಾವಿಗಳಿಗೆ ಜೀವಧಾರ ಪದವೀಧರ ಘಟಕ ವತಿಯಿಂದ ರಾಜ್ಯ ಸರ್ಕಾರದ ಆರ್ಥಿಕ ಪರಿಹಾರದ ತಲಾ 2000 ರೂ. ಗಳ ಸವಲತ್ತು ತಲುಪಿಸಲು ಸೇವಾ ಸಿಂಧು ಮೂಲಕ ಆನಲೈನ್ ಪ್ರಕ್ರಿಯೆ ಸಹಾಯ ವ್ಯವಸ್ಥೆ ಮಾಡಿಕೊಡಲಾಯಿತು.

ಪುರಭವನ ಎದುರಿರುವ ಡಾ. ರಾಜ್ ಕುಮಾರ್ ಉದ್ಯಾನದ ಪ್ರತಿಮೆಯ ಬಳಿ ಡಿ. ದೇವರಾಜ ಅರಸು ಅಭಿವೃದ್ಧಿ ಹಿಂದುಳಿದ ಅಭಿವೃದ್ಧಿ ನಿಗಮಗಳ ಪ್ರಾಧಿಕಾರ ಅಧ್ಯಕ್ಷ ಆರ್ ರಘು ಕೌಟಿಲ್ಯ ರವರು 50 ಬಡಕುಟುಂಬಗಳಿಗೆ ಪರಿಹಾರ ಅರ್ಜಿ ಸ್ವೀಕೃತಿ ಪತ್ರವನ್ನ ವಿತರಿಸಿ ಮಾತನಾಡಿ ಹೇಳಿದಿಷ್ಟು..

jk

ಸೊಂಕಿನಿಂದ ಮನುಷ್ಯ ಪಾರಾಗಲು ಜೀವವಿದ್ದರೇ ಜೀವನ ನಂತರ ಸಂಪಾದನೆ ಬದುಕಿಗೆ ಆದ್ಯತೆ ಕೊಡಬೇಕು , ಜನತಾ ಕರ್ಫ್ಯೂ ಲಾಕ್ ಡೌನ್ ನಿಯಮಗಳನ್ನ ಕಠಿಣವಾಗಿ ನಾಗರೀಕರು ಪಾಲಿಸಿದ ಒಳ್ಳೆಯ ಬೆಳವಣಿಗೆಯಿಂದ ಸೊಂಕು ನಿಯಂತ್ರಣಕ್ಕೆ ಬರುತ್ತಿದೆ, ಆರ್ಥಿಕ ಪರಿಸ್ಥಿತಿ ಸುಧಾರಣೆಯ ಸಲುವಾಗಿ ರಾಜ್ಯಸರ್ಕಾರದಿಂದ ಕೋವಿಡ್ 2ನೇ ಅಲೆಯ ಸಂಕಷ್ಟದ ಸಮಯದಲ್ಲಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ರವರು ಶ್ರಮಿಕ ವರ್ಗ ಮಡಿವಾಳ, ಕ್ಷೌರಿಕರು, ದರ್ಜಿಗಳು, ಕಲಾವಿದರು, ಮೆಕ್ಯಾನಿಕ್, ಹಮಾಲರು, ಅಲೆಮಾರಿಗಳು, ಭಟ್ಟಿ ಕಾರ್ಮಿಕರು ಅಕ್ಕಸಾಲಿಗರು, ಕಮ್ಮಾರರು, ಆಟೋ ಚಾಲಕರು, ಗೃಹ ಕಾರ್ಮಿಕರ ವರೆಗೂ ಅಸಂಘಟಿತ ವಲಯದ ಅಡಿಯಲ್ಲಿ ಶ್ರಮಿಸುವ ವರ್ಗಕ್ಕೆ 2000 ರೂ. ಗಳ ಆರ್ಥಿಕ ಸಂಕಷ್ಟ ಪರಿಹಾರವನ್ನ ಬಿಡುಗಡೆ ಮಾಡಿದ್ದಾರೆ , ಜೀವಧಾರ ಪದವೀಧರ ಘಟಕ ವತಿಯಿಂದ ಸೇವಾಸಿಂಧೂ ಪೋರ್ಟಲ್ ಆನ್ಲೈನ್ ನೋಂದಣಿ ಪ್ರಕ್ರಿಯೆಯನ್ನು ಉಚಿತವಾಗಿ ಮಾಡಿಕೊಡಲಾಗುತ್ತಿದ್ದು ಇದರ ಸದುಪಯೋಗವನ್ನ ಕಡುಬಡಕುಟುಂಬ ಸೂಕ್ತ ದಾಖಲಾತಿಗಳಾದ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ವೃತ್ತಿ ಧೃಡಿಕರಣಪತ್ರ ಮತ್ತು ಭಾವಚಿತ್ರವನ್ನು ನೀಡಿ ನಾಗರೀಕರು ಇದರ ಸವಲತ್ತನ್ನು ಪಡೆಯಬಹುದಾಗಿದೆ ಇದಕ್ಕಾಗಿ ಸಹಾಯವಾಣಿಯನ್ನ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ತರೆಯಲಾಗಿದೆ ಎಂದರು.

ಬಿಜೆಪಿ ರಾಜ್ಯ ವಕ್ತಾರ ಎಂ.ಜಿ ಮಹೇಶ್ ಅವರು ಮಾತನಾಡಿ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದನ್ನ ನಾಗರೀಕರು ಕಡ್ಡಾಯವಾಗಿ ಪಾಲಿಸಬೇಕು, ವೃತ್ತಿಯಾಧಾರಿತ‌ ಶ್ರಮಿಕ ಬಡಕುಟುಂಬಗಳು ಸಹಾಯಧನ ಸವಲತ್ತು ಪಡೆದುಕೊಳ್ಳುವಲ್ಲಿ ಮುಂದಾಗಬೇಕು ಹಾಗೂ ಸಹಾಯಧನ ಯೋಜನೆ ಮಾಹಿತಿಯನ್ನ ನೆರೆಮನೆಯವರಿಗೂ ಸಹ ಅರಿವು ಮೂಡಿಸಬೇಕು ಎಂದರು,

ಸವಿತಾ ಸಮಾಜದ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ರಮೇಶ್ ಕುಮಾರ್ ರವರು ಮಾತನಾಡಿ ಲಾಕ್ ಡೌನ್ ಸಂಧರ್ಭದಲ್ಲಿ ಕ್ಷೌರಿಕ ಅಂಗಡಿ ಮುಂಗಟ್ಟುಗಳು ಮುಚ್ಚಿರುವ ಕಾರಣದಿಂದಾಗಿ ಮೈಸೂರು ಜಿಲ್ಲೆಯಲ್ಲಿ 6ಸಾವಿರಕ್ಕೂ ಹೆಚ್ಚು ಮಂದಿ ಕ್ಷೌರಿಕರು ತೊಂದರೆಯಲಿದ್ದಾರೆ, ದಿನಕ್ಕೆ ಹತ್ತು ಮಂದಿಗಾದರೂ ಕ್ಷೌರಿಕ ಕಾರ್ಯ ನೆರವೇರಿಸಲೂ ಸರ್ಕಾರ ಅವಕಾಶ ಕಲ್ಪಿಸಿಕೊಡಬೇಕು ಎಂದರು

ಬಿಜೆಪಿ ನಗರಪಾಲಿಕೆ ಸದಸ್ಯ ಎಂ. ಸತೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸದಸ್ಯರಾದ ರೇಣುಕಾ ರಾಜ್, ಜೀವಧಾರ ಪದವೀಧರ ಘಟಕದ ಕಾರ್ಯದರ್ಶಿ ವರಲಕ್ಷ್ಮಿ, ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ , ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಬಿಜೆಪಿ ಮಹಿಳಾ ಮೋರ್ಛಾ ನಗರ ಉಪಾಧ್ಯಕ್ಷೆ ಸರಸ್ವತಿ ಪ್ರಸಾದ್, ಸವಿತಾ ಸಮಾಜದ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ರಮೇಶ್ ಬ್ರಹ್ಮಾಚಾರ್, ಪೃಥ್ವಿ ಸಿಂಗ್ ಚಂದಾವತ್ ಇನ್ನಿತರರು ಇದ್ದರು.

key words : mysore-devaraj-arus-development-raghu-backword-community