ಹಿಂದೂ ಬಗ್ಗೆ ನನ್ನ ಹೇಳಿಕೆ ತಪ್ಪೆಂದು ಸಾಬೀತು ಪಡಿಸಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ- ಸತೀಶ್ ಜಾರಕಿಹೊಳಿ.

ಬೆಳಗಾವಿ,ನವೆಂಬರ್,8,2022(www.justkannada.in): ಹಿಂದೂ ಬಗ್ಗೆ ನನ್ನ ಹೇಳಿಕೆ ತಪ್ಪೆಂದು ಸಾಬೀತು ಪಡಿಸಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಬಿಜೆಪಿ ನಾಯಕರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ  ಸತೀಶ್ ಜಾರಕಿಹೊಳಿ ಸವಾಲು ಹಾಕಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿ ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಸತೀಶ್ ಜಾರಕಿಹೊಳಿ, ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ.  ಹಿಂದೂ ಧರ್ಮಕ್ಕೆ ಎಲ್ಲಿ ಅವಮಾನ ಮಾಡಿದ್ದೇನೆ..? ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಅಶ್ಲೀಲ ಅಂತಾ ನಾನು ಬರದಿದ್ದಾ..?  ಅದು ಪರ್ಷಿಯನ್ ಪದ. ಇದಕ್ಕೆ ವಿಕಿಪಿಡಿಯಾದಲ್ಲಿ ದಾಖಲೆ ಇದೆ. ಡಿಕ್ಷನರಿಯಲ್ಲಿ ಹಿಂದೂ ಅರ್ಥ ಅಶ್ಲೀಲ ಅಂತಿದೆ ಎಂದು ಪುನರುಚ್ಚರಿಸಿದರು.

ನಾನು ಪಕ್ಷದ ವೇದಿಕೆಯಲ್ಲಿ ಮಾತನಾಡಿಲ್ಲ. ಪಕ್ಷಕ್ಕೂ ನನ್ನ ಹೇಳಿಕೆಗೂ ಸಂಬಂಧವಿಲ್ಲ. ಪಕ್ಷದ ನಿಲುವು ಬೇರೆ ಇದೆ. ರಾಜ್ಯಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರ ಖಂಡನೆಗೆ ಆಕ್ಷೇಪಿಸಲ್ಲ. ಮನುವಾದಿಗಳು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

Key words: my statement – proved – wrong- resign –MLA-Sathish Jarakiholi.