ಆರು ಸಾಧಕರಿಗೆ 2022ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿ:  ನಾಳೆ ಪ್ರದಾನ.

ಬೆಂಗಳೂರು,ಅಕ್ಟೋಬರ್,8,2022(www.justkannada.in): 2022ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ರಾಜ್ಯ ಸರ್ಕಾರ ಪ್ರಕಟಿಸಿದ್ದು, ಆ ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರಿನ ಎಲ್​​.ಮುನಿಸ್ವಾಮಿ, ಬಳ್ಳಾರಿಯ ಉಷಾರಾಣಿ, ಚಿಕ್ಕಬಳ್ಳಾಪುರ ಜಿಲ್ಲೆ ಎನ್​.ನಾಗಪ್ಪ, ವಿಜಯನಗರ ಜಿಲ್ಲೆ ಪದ್ಮ, ಬೆಳಗಾವಿ ಜಿಲ್ಲೆಯ ನಾಗಪ್ಪ ಹೆಚ್. ಕೋಣಿ, ಮೈಸೂರು ಜಿಲ್ಲೆಯ ಹೆಚ್​.ಎಸ್​.ಸುಭಾಷ್ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಈ ಎಲ್ಲ ಸಾಧಕರಿಗೆ ನಾಳೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Key words: Maharshi Valmiki- Award- 2022 – six achievers