ಸಿಎಂ ವಿರುದ್ಧ ಪತ್ರ: ಕೆ.ಎಸ್ ಈಶ್ವರಪ್ಪ‌ ವಿರುದ್ಧ ತಿರುಗಿ ಬಿದ್ದ ಸಚಿವರು, ಶಾಸಕರು…

ಬೆಂಗಳೂರು,ಏಪ್ರಿಲ್,1,2021(www.justkannada.in): ತಮ್ಮ‌ ಖಾತೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಸ್ತಕ್ಷೇಪ ಮಾಡುತ್ತಿದ್ದು ಅವರ ವಿರುದ್ಧ ಕ್ರಮ‌ಕೈಗೊಳ್ಳುವಂತೆ ರಾಜ್ಯಪಾಲರಿಗೆ ದೂರು ನೀಡಿದ ಸಚಿವ ಈಶ್ವರಪ್ಪ ವಿರುದ್ಧ ಹಲ ಸಚಿವರು,ಶಾಸಕರು ತಿರುಗಿ ಬಿದ್ದಿದ್ದಾರೆ.Illegally,Sand,carrying,Truck,Seized,arrest,driver

ನಾವು ಮಂತ್ರಿಗಳಾಗಲು‌ ಯಡಿಯೂರಪ್ಪ ಕಾರಣ ಎಂಬುದರಿಂದ ಹಿಡಿದು,ತಮಗಿರುವ ಅಧಿಕಾರವನ್ನು ಬಳಸಿ ಯಾರ ಖಾತೆಗಾದರೂ ಅವರು ಕೈ ಹಾಕಬಹುದು ಎಂಬಲ್ಲಿಯ ತನಕ ಇವರು ಮಾತನಾಡಿದ್ದು ಆ ಮೂಲಕ ಈಶ್ವರಪ್ಪ ಅವರು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಜ್ಜಾಗಬೇಕಿದೆ. ಇದಾಗದಿದ್ದರೆ ಯಡಿಯೂರಪ್ಪ ಅವರ ಆಕ್ರೋಶದಿಂದ ಬಚಾವಾಗಲು ವರಿಷ್ಟರ ನೆರವು ಬಯಸಬೇಕಿದೆ.

ಈ‌ ಹಿಂದೆ ಈಶ್ವರಪ್ಪ ಅವರ ಜತೆ, ಜತೆಗೇ ಉಪಮುಖ್ಯಮಂತ್ರಿ‌ ಹುದ್ದೆಯನ್ನು ಅಲಂಕರಿಸಿದ್ದ ಹಾಲಿ ಕಂದಾಯ ಸಚಿವ ಆರ್.ಅಶೋಕ್: ನಾವು ಮಂತ್ರಿಗಳಾಗಿರುವುದು ಯಡಿಯೂರಪ್ಪ ಅವರ ವಿವೇಚನಾ ಅಧಿಕಾರದಿಂದ ಎಂದು ಈಶ್ವರಪ್ಪ ಅವರನ್ನು ಚುಚ್ಚಿದ್ದಾರೆ.

ಯಡಿಯೂರಪ್ಪ ಅವರು ಬಯಸಿದ್ದರಿಂದ ನಾವು ಅವರ ಸಂಪುಟದಲ್ಲಿದ್ದೇವೆ. ಹೀಗಾಗಿ ಈಶ್ವರಪ್ಪ ಅವರು ತಮ್ಮ‌ ಭಾವನೆಯನ್ನು ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳಬೇಕಿತ್ತು ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಸಿಎಂ ಬಯಸಿದಾಗ ಯಾರ ಸಚಿವರ ಖಾತೆಯನ್ನಾದರೂ ಪರಿಶೀಲಿಸಬಹುದು…

ಅರೋಗ್ಯ ಸಚಿವ ಡಿ.ಸುಧಾಕರ್ ಅವರು ಮಾತನಾಡಿ, ಮುಖ್ಯಮಂತ್ರಿಗಳು ಬಯಸಿದಾಗ ಯಾರ ಸಚಿವರ ಖಾತೆಯನ್ನಾದರೂ ಪರಿಶೀಲಿಸಬಹುದು ಎಂದಿದ್ದಾರೆ. ಹೀಗೆ ಅವರು ಪರಿಶೀಲನೆ ನಡೆಸಿ ವಿಶೇಷ ಅನುದಾನ ಬಿಡುಗಡೆ ಮಾಡಲು‌ ನಿರ್ಧರಿಸಿದರೆ ಮಾಡಬಹುದು. ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಬಯಸಿದರೂ ಮಾಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಯಡಿಯೂರಪ್ಪ ಅವರು ಪಕ್ಷದ ಶಾಸಕರು ಮತ್ತು ಹೈಕಮಾಂಡ್ ಬಯಸಿದ್ದರಿಂದ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಈಶ್ವರಪ್ಪ ಅವರು ಮಾತುಕತೆಯ ಮೂಲಕ ಐದು ನಿಮಿಷದಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು ಎಂದು ಹೇಳಿದ್ದಾರೆ.

ಇದೇ ರೀತಿ‌ ಕೃಷಿ ಸಚಿವ ಬಿ.ಸಿ.ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮತ್ತಿತರರು ಈಶ್ವರಪ್ಪ ಹೇಳಿಕೆಗೆ ತಿರುಗೇಟು  ನೀಡಿದ್ದು, ಆ ಮೂಲಕ ಈಶ್ವರಪ್ಪ ಪ್ರಕರಣ  ವಿಕೋಪಕ್ಕೆ ಹೋಗುವ ಸಾಧ್ಯತೆಗಳಿವೆ.Letter -against –CM- Ministers-MLA - turned –against- Minister- KS Eshwarappa.

ಈ ಮಧ್ಯೆ ಸಚಿವ ಕೆ.ಎಸ್ ಈಶ್ವರಪ್ಪ ಅವರು ದೂರು ನೀಡಿದ ಕ್ರಮದಿಂದ ಕ್ರುದ್ಧರಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಇಂದು ಬೆಳಿಗ್ಗೆ ತಮ್ಮ ಆಪ್ತರೆದುರು ಕೂಗಾಡಿದ್ದು  ಈಶ್ವರಪ್ಪ ಅವರ ಖಾತೆ ಹಿಂಪಡೆಯುತ್ತೇನೆ. ಜಾಸ್ತಿ ಮಾತನಾಡಿದರೆ ಸಂಪುಟದಿಂದ ಕೈ ಬಿಡುತ್ತೇನೆ ಎಂದಿದ್ದಾರೆನ್ನಲಾಗಿದೆ.

ಈಶ್ವರಪ್ಪ ಅವರ ನಡೆಯಿಂದ ಪ್ರತಿಪಕ್ಷಗಳಿಗೆ ಆಹಾರ ಸಿಕ್ಕಂತಾಗಿದೆ. ಇದು ಸರ್ಕಾರದ ಇಮೇಜ್ ಗೆ ಧಕ್ಕೆ ತಂದಿದೆ ಎಂಬುದು ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಕ್ರೋಶ.

Key words: Letter -against –CM- Ministers-MLA – turned –against- Minister- KS Eshwarappa.