ಮಲೆ ಮಹದೇಶ್ವರ ಬೆಟ್ಟದಲ್ಲಿ ಅಮಾನವೀಯ ಘಟನೆ: ತಾಯಿ ಮಗನನ್ನ ಮನೆಯಿಂದ ಹೊರಗೆ ಹಾಕಿದ ಅಧಿಕಾರಿಗಳು.

ಚಾಮರಾಜನಗರ,ಜನವರಿ,15,2022(www.justkannada.in):  ಅಧಿಕಾರಿಗಳು ವಸತಿ ಗೃಹದಲ್ಲಿ ವಾಸವಿದ್ದ ತಾಯಿ ಮಗನನ್ನ ಹೊರಗೆ ಹಾಕಿರುವ ಅಮಾನವೀಯ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೇ ಮಹದೇಶ್ವರಬೆಟ್ಟದಲ್ಲಿ ನಡೆದಿದೆ.

ಮಲೇ ಮಹದೇಶ್ವರ ಬೆಟ್ಟದ ವಸತಿ ಗೃಹದಲ್ಲಿದ್ದ ನೌಕರ ಜಯಸ್ವಾಮಿ ಕಳೆದ 3 ವರ್ಷದ ಹಿಂದೆ ಕಿಡ್ನಿ ವೈಪಲ್ಯದಿಂದ ಮೃತಪಟ್ಟಿದ್ದರು. ಅಂದಿನಿಂದಲೂ ನೌಕರ ಜಯಸ್ವಾಮಿ ಅವರ ಪತ್ನಿ ಹಾಗೂ ಮಗ ವಸತಿ ಗೃಹದಲ್ಲೇ ವಾಸವಿದ್ದರು.  ಈ ನಡುವೆ ಮಗ ಶಾಂತಮಲ್ಲೇಶ್ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದು ವರ್ಷದಿಂದ ಇವರಿಗೂ ಕೆಲಸವಿರಲಿಲ್ಲ.

ಇದೀಗ ಅಧಿಕಾರಿಗಳು ತಾಯಿ ಮತ್ತು ಮಗನನ್ನ ವಸತಿಗೃಹದಿಂದ ಹೊರಗೆ ಹಾಕಿದ್ದಾರೆ. ಅಧಿಕಾರಿಗಳ ನಡೆಯಿಂದ ಮೃತ ಜಯಸ್ವಾಮಿ ಅವರ ಕುಟುಂಬಕ್ಕೆ ಇರಲು ಮನೆಯೂ ಇಲ್ಲ. ಮಗನಿಗೆ ನೌಕರಿಯೂ ಇಲ್ಲದಂತಾಗಿದೆ. ತಾಯಿಮಗ ಬೀದಿಗೆ ಬಿದಿದ್ದಾರೆ.

Key words: Inhumane -incident – Male Mahadeshwara hill.