ರಾಹುಲ್ ಗಾಂಧಿಗೆ ಭಾರತೀಯ ಸೇನೆ ಮೇಲಿರುವ ಪ್ರೀತಿಗಿಂತ ಚೀನಾ ಮೇಲಿನ ಪ್ರೀತಿಯೇ ಹೆಚ್ಚಿರುವಂತೆ ಕಾಣುತ್ತಿದೆ-ಸಂಸದ ಪ್ರತಾಪ್ ಸಿಂಹ…

ಮೈಸೂರು,ಜೂ,17,2020(www.justkannada.in):  ಗಡಿಯಲ್ಲಿ ಭಾರತ- ಚೀನಾ ಸಂಘರ್ಷದ ವೇಳೆ ದೇಶದ ಯೋಧರ ಹುತಾತ್ಮರಾದ ಹಿನ್ನೆಲೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ತರಾಟೆ ತೆಗೆದುಕೊಂಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ್ ಟಾಂಗ್ ನೀಡಿದ್ದಾರೆ.

ರಾಹುಲ್ ಗಾಂಧಿ ಅವರಿಗೆ ಭಾರತದ ಸೇನೆಯ ಮೇಲಿರುವ ಪ್ರೀತಿಗಿಂತ ಚೀನಾ ಮೇಲಿನ ಪ್ರೀತಿಯೇ ಹೆಚ್ಚಿರುವಂತೆ ಕಾಣುತ್ತಿದೆ. ಡೋಕ್ಲಮ್ ನಲ್ಲಿ ಉಂಟಾಗಿದ್ದ ಬಿಕ್ಕಟ್ಟಿನ ಕುರಿತು ಭಾರತ ಸರ್ಕಾರದ ಬಳಿ ಮಾಹಿತಿ ಕೇಳದೆ ಚೀನಾದ ರಾಯಭಾರಿಯಿಂದ ಮಾಹಿತಿ ಕೇಳಿದ್ದವರು ರಾಹುಲ್ ಗಾಂಧಿ. ಸಂಘರ್ಷ ನಡೆದರೆ ಯುದ್ಧವಲ್ಲ.  ಒಂದು ವೇಳೆ ಯುದ್ಧಕ್ಕೆ ಬಂದರೆ ಅದಕ್ಕೂ ನಮ್ಮ ಸೈನಿಕರು ಸಿದ್ಧ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಭಾರತ ಚೀನಾ ಗಡಿಯಲ್ಲಿ ದೇಶದ ಯೋಧರು ಹುತಾತ್ಮ ಹಿನ್ನೆಲೆ ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ  ಸಂಸದ ಪ್ರತಾಪ್ ಸಿಂಹ, ಈಗ ಇರುವುದು ನೆಹರು ಸರ್ಕಾರವಲ್ಲ, ಇದು ಮೋದಿ ಸರ್ಕಾರ. ಇದು 1962 ರ ಭಾರತವಲ್ಲ, ಇಂದು 2020 ರ ಮೋದಿ ಭಾರತ. ಚೀನಾ ನಮ್ಮ ತಂಟೆಗೆ ಬಂದರೆ ಅದರದ್ದೇ ಆದ ಭಾಷೆಯಲ್ಲಿ ಉತ್ತರ ಕೊಡುವ ಸಾಮರ್ಥ್ಯ ನಮ್ಮ ಪ್ರಧಾನಿಯವರಿಗಿದೆ. ನಮ್ಮ ಬಳಿಯೂ ಅಣ್ವಸ್ತ್ರ ಇದೆ ಹಾಗಾಗಿ ಅಷ್ಟು ಸುಲಭವಾಗಿ ಚೀನಾ ಯುದ್ಧಕ್ಕೆ ಬರುವ ಸಾಧ್ಯತೆ ಕಡಿಮೆ. ದೇಶ ಈಗ ಸಮರ್ಥ ನಾಯಕನ ಕೈಯಲ್ಲಿದೆ ಎಂದು ತಿಳಿಸಿದರು.india-china-border-conflict-mp-prathap-simha-rahul-gandhi

ಸಂಘರ್ಷ ನಡೆದರೆ ಯುದ್ಧವಲ್ಲ ಒಂದು ವೇಳೆ ಯುದ್ಧಕ್ಕೆ ಬಂದರೆ ಅದಕ್ಕೂ ಸಿದ್ಧ. ನಮ್ಮ ಸೈನಿಕರು ಎಲ್ಲಾ ತ್ಯಾಗಕ್ಕೂ ಸಿದ್ಧರಾಗಿದ್ದಾರೆ. ಈಗಿರುವ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಪ್ರಧಾನಿ ಮೋದಿಯವರು ಸಮರ್ಥರಾಗಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

Key words: india – china-border- Conflict-MP –Prathap simha-Rahul gandhi