ನಂಜನಗೂಡಿನಲ್ಲಿ ವೈಯಕ್ತಿಕ ದ್ವೇಷಕ್ಕೆ ಮನೆ ಧ್ವಂಸ 

kannada t-shirts

ಮೈಸೂರು,ಅಕ್ಟೋಬರ್,29,2020(www.justkannada.in) : ಜಿಲ್ಲೆಯ ನಂಜನಗೂಡು ತಾಲೂಕಿನ ಮಲ್ಲುಪುರ ಗ್ರಾಮದಲ್ಲಿ ವೈಯಕ್ತಿಕ ದ್ವೇಷಕ್ಕೆ ಮನೆಯ ಮೇಲೆ ಕಲ್ಲೆಸೆದು ಧ್ವಂಸ ಮಾಡಿರುವ ಘಟನೆ ನಡೆದಿದೆ. ಮನೆ ಮೇಲ್ಚಾವಣಿ, ವಸ್ತುಗಳಿಗೆ ಹಾನಿಯಾಗಿದೆ.jk-logo-justkannada-logo

ಮೋರಿ ವಿಚಾರವಾಗಿ ಹರಿಕಥೆ ಕಲಾವಿದ ಸಚಿನ್ ಹಾಗೂ ಪಕ್ಕದ ಮನೆಯ ಸುರೇಶ್ ನಡುವೆ ಜಗಳವಾಗಿತ್ತು. ಈ ದ್ವೇಷಕ್ಕೆ ಸುರೇಶ್, ಸಚಿನ್ ಮನೆ ಮೇಲ್ಚಾವಣಿ ಮೇಲೆ ಕಲ್ಲೆಸೆದು ಧ್ವಂಸ ಮಾಡಿದ್ದಾರೆ ಎನ್ನಲಾಗುತ್ತಿದೆ.

ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್  ಸೇರಿದಂತೆ ಹಲವು ವಸ್ತುಗಳು ಹಾನಿHome-wreck-personal-hatred-Nanjangud

ಸಚಿನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ದೃಷ್ಕೃತ್ಯ ನಡೆದಿದೆ. ಮೇಲ್ಛಾವಣಿ ಹೊಡೆದು ಹೋಗಿರುವ ಪರಿಣಾಮ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್  ಸೇರಿದಂತೆ ಹಲವು ವಸ್ತುಗಳಿಗೆ ಹಾನಿಯಾಗಿದೆ. ಈ ಬಗ್ಗೆ ಬಿಳಿಗೆರೆ ಪೊಳಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

key words : Home-wreck-personal-hatred-Nanjangud

website developers in mysore