ಬಿಜೆಪಿಗೆ ಬಾಹ್ಯ ಬೆಂಬಲ ಕುರಿತು ಜಿಟಿಡಿ ಹೇಳಿಕೆ ವಿಚಾರ ಮತ್ತು ಮೈತ್ರಿ ಮುಂದುವರೆಕೆ  ಬಗ್ಗೆ  ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದ್ದೇನು ಗೊತ್ತೆ..?

ಬೆಂಗಳೂರು,ಜು,27,2019(www.justkannada.in):  ಬಿಜೆಪಿಗೆ ಬಾಹ್ಯ ಬೆಂಬಲ ಕುರಿತು ಮಾಜಿ ಸಚಿವ ಜಿ.ಟಿ ದೇವೇಗೌಡರು ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು,  ನಾವು ರಚನಾತ್ಮಕ ವಾಗಿ ಕೆಲಸ ಮಾಡ್ತೇವೆ ಎಂದು ಹೇಳಿದ್ದೇನೆ.  ಫೈನಾನ್ಸ್ ಬಿಲ್ ಪಾಸ್ ಮಾಡ್ಲಿ, ಕುಮಾರ ಸ್ವಾಮಿ ಮಂಡಿಸಿದ ಬಜೆಟ್ ಅದು ಹೀಗಾಗಿ ಜಿ.ಟಿ. ದೇವೇಗೌಡ ಹೇಳಿದ ವಿಚಾರ ದೊಡ್ಡ ವಿಷಯವೇ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ಸಭೆ ಬಳಿಕ ಮಾಧ್ಯಮದ ಜತೆ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, 14 ತಿಂಗಳಿಗೆ ಮನೆಗೆ ಹೊಗಬೇಕಲ್ಲ ಎಂಬ ನೋವು ಕಾಂಗ್ರೆಸ್ ನವರಿಗೂ ಇದೆ. ಜೆಡಿಎಸ್ ನವರಿಗೂ ಇದೆಹೀಗಾಗಿ ಜಿ.ಟಿ. ದೇವೇಗೌಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅವರಿಗೆ  ಅಷ್ಟು ಹಕ್ಕು ಇಲ್ವಾ..? ಜಿ.ಟಿ ದೇವೇಗೌಡರ ಹೇಳಿಕೆ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಎಂದರು.

ಬೆಂಗಳೂರು ಲೋಕಸಭಾ ಕ್ಷೇತ್ರದ ಸಭೆ ಕರೆದಿದ್ದೇವೆ. ಗೋಪಾಲಯ್ಯ ಅವ್ರು ನಮ್ಮ ಮೇಲೆ ಅನೇಕ ತಪ್ಪು ಹೇಳಿಕೆ ನೀಡಿದ್ದಾರೆ ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡಿ ಬಾಂಬೆಗೆ ಹೋಗಿದ್ದಾರೆ. ಸ್ಪೀಕರ್ ಈ ವಾರದಲ್ಲಿ ತೀರ್ಮಾನ ಕೊಡುವುದಾಗಿ ತಿಳಿಸಿದ್ದಾರೆ ನಂತರ ಚುನಾವಣೆ ಇರು ತೋ ಇಲ್ವೋ ಗೊತ್ತಿಲ್ಲ. ನಾನು ಸೋತ ದಿನದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಜುಲೈ ಕೊನೆ ಅಥವಾ ಆಗಸ್ಟ್ 2 ನೇ ವಾರದಲ್ಲಿ ಮಹಿಳಾ ಸಮಾವೇಶ ಮಾಡುತ್ತೇವೆ. ಯಾರು ಏನೇ ಮಾಡಿದ್ರು ಈ ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಸರ್ಕಾರ ಹೋದ್ರು ನಮಗೆ ತೊಂದರೆ ಇಲ್ಲ ಈ ಪಕ್ಷ ಉಳಿಸುವ ಕೆಲಸ ಮಾಡ್ತೀನಿ ಎಂದರು.

ಕುಮಾರಸ್ವಾಮಿ ಸಿಎಂ ಆಗಿ ಎಷ್ಟು ನೋವು ತಿಂದಿದ್ದಾರೆ. ಅವರು. ಜೆಪಿ ಭವನದಲ್ಲಿ 15 ನಿಮಿಷ ಅತ್ತಿದ್ದಾರೆ ಎಷ್ಟು ಕಷ್ಟ ಪಟ್ಟಿದ್ದಾರೆ ಎಲ್ಲಾ ಗೊತ್ತಿದೆ. ಸರ್ಕಾರ ಹೋದ್ರು ಚಿಂತೆಯಿಲ್ಲ. ಪಕ್ಷ ಸಂಘಟನೆ ಮಾಡ್ತೀನಿ. ಸರ್ಕಾರ ಹೋಯ್ತು ಏನ್ ಮಾಡೋಕೆ ಆಗೊಲ್ಲ ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.

ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ಆ ಬಗ್ಗೆ ಈಗಲೆ ಚರ್ಚೆ ಯಾಕೆ, ಮುಂದೆ ನೋಡೋಣ  ಎಂದು ಹೇಳಿದರು. ಇನ್ನು ಎಲ್ಲಾ ವಿಷಯಕ್ಕೂ ಸುಮ್ಮನೆ ವಿರೋಧ ಮಾಡೋದಿಲ್ಲ. ಫೈನಾನ್ಸ್ ಬಿಲ್ ಎಲ್ಲಾರು ಸರ್ವಾನುಮತದಿಂದ ಒಪ್ಪಿದ್ರೆ ನಮ್ಮ ಬೆಂಬಲವೂ ಇರುತ್ತೆ. ಜಿಟಿ ದೇವೇಗೌಡರ ಹೇಳಿಕೆ ದೊಡ್ಡದು ಮಾಡೋ ಅವಶ್ಯಕತೆ ಇಲ್ಲ. ಪ್ರಾದೇಶಿಕ ಪಕ್ಷವಾಗಿ ನಮ್ಮ ಕೆಲಸ ನಾವು ಮಾಡ್ತೀವಿ. ಕುಮಾರಸ್ವಾಮಿ ಅಪ್ಪನಾಗಿ ನಾನು ಹೇಳ್ತಿದ್ದೇನೆ.  ವಿಷಯಾಧಾರಿತವಾಗಿ ನಾವು ಬೆಂಬಲ ಕೊಡ್ತೀವಿ ಎಂದು ತಿಳಿಸಿದರು.

ದ್ವೇಷ ರಾಜಕಾರಣ ಮಾಡಲ್ಲ ಎಂಬ ಸಿಎಂ ಬಿಎಸ್ ವೈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ನಾನು ಯಡಿಯೂರಪ್ಪ ಅವ್ರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಯಾವುದೇ ದ್ವೇಷ ಇಲ್ಲದೆ ಕೆಲಸ ಮಾಡುತ್ತೇನೆ ಅಂತ ಯಡಿಯೂರಪ್ಪ ಹೇಳಿದ್ದಾರೆ.  ರಾಜ್ಯಕ್ಕೆ ಒಳ್ಳೆಯದು ಮಾಡಿದ್ರೆ ನಮ್ಮ ಸಹಕಾರ ಇರುತ್ತೆ. ನಾವು ಪರಿಣಾಮಕಾರಿಯಾಗೆ ವಿರೋಧ ಪಕ್ಷ ಕೆಲಸ ಮಾಡಲು ನಾನು ಸೂಚನೆ ನೀಡಿದ್ದೇನೆ ಎಂದರು.

Key words: external -support – BJP-continuation – alliance- Former Prime Minister -HD Deve Gowda